Saturday, February 12, 2011

ನಾನು ಮಾಡಿದ್ದು ಸರಿನಾ.........................?


                       ಆವತ್ತು ಬೆಂಗಳೂರಿನಿಂದ ಊರಿಗೆ ಬರುತಿದ್ದೆ, ಬೆಂಗಳೂರಿನಿಂದ ಹುಬ್ಬಳ್ಳಿ ಇಂಟರ್ ಸಿ ಟಿ ಟ್ರೈನ್ ಮುಲಕ ರಾಣೇಬೆನ್ನೊರಿಗೆ ಬಂದಾಗ ಸಂಜೆ ೭.೧೦, ರೈಲ್ವೇ ಸ್ಟೆಷನಿಂದ ಬಸ್ ಸ್ಟಾಂಡಗೆ ಬಂದಾಗ ೭.೩೦ ಆಗಿತ್ತು ಬೇಸಿಗೆ ಆದ ಕಾರಣ ಅನಿಯತ್ರಿತ್ ಲೋಡ್ ಶೇಡಿಂಗ್ ಇತ್ತು, ಅಂದು ಸಂಜೆ ಕೊಡ ಕರೆಂಟ್ ಇರಲಿಲ್ಲ, ನಾನು ನಮ್ಮುರ ಕಡೆ ಬಸ್ ಗಾಗಿ ಕಾಯುತ್ತಾ ಬಸ್ ಸ್ಟಂಡನಲ್ಲಿ ನಿಂತಿದ್ದೆ, ಯಾರ ಮುಖಗಳು ಸ್ಪಷ್ಟ್ವ ವಾಗಿ ಕಾಣುತಿರಲಿಲ್ಲ, ಅಲ್ಲಿ ಇದ್ದ ಎಲ್ಲಾ ಮುಖಗಳು ಕೇವಲ ಕಪ್ಪನೆ ಆಕಾರದಂತೆ ಗೂಚರಿಸುತಿದ್ದರು.
               ೨೬-೨೮ ವಷ೯ದ ವಯಸ್ಸಿನ ಒಬ್ಬ ಯುವಕ (ಕತ್ತೆಲೆಯಲ್ಲಿ ಅವನ ಮುಖ ನನಗೆ ಸರಿಯಾಗಿ ಕಾಣುತ್ತಿರಲಿಲ್ಲ) ನನ್ನ ಹತ್ತಿರ ಬಂದು ಸಮಯ ಎಸ್ಟು ಎಂದು ಕೇಳಿದ ನಾನು ಹೇಳಿದೆ ನಂತರ ಕೆಲ ಕ್ಷಣ ಸುಮ್ಮನಿಂದ್ದು ನಂತರ ಎಲ್ಲಿಗೆ ಹೋಗಬೇಕು ಎಂದು ಕೇಳಿದ ನಾನು ನಮ್ಮ ಊರಿನ ಹೇಸರು ಹೇಳಿ ಮರಳಿ ನೀನು ಎಲ್ಲಿಗೆ ಹೋಗಬೇಕು ಏಂದು ಕೇಳಿದೆ ಅದಕ್ಕೆ ಅವನು "ಶಿಕಾರಿಪುರ" ಎಂದ, ಮತ್ತೆ ಕೇಲ ಕ್ಷಣಗಳ ಮೌನದ ನಂತರ ಅವನು ನನಗೆ ಎಟಿಮ್ ಕಾಡ೯ ಕಳಿದು ಹೊದರೆ ಏನು ಮಾಡಬೇಕು ಎಂದು ಕೇಳಿದ ಅದಕೆ ನಾನು ಸಂಬಂದಿಸಿದ ಬ್ಯಾಂಕೀಗೆ ಹೋಗಿ ದೂರು ನೀಡಿ, ಹಳಯ ಎಟಿಮ್ ಕಾಡ೯ ಬ್ಲಾಕ್ ಮಾಡಿ ಅದರ ಬದಲು ಹೊಸಾ ಎಟಿಮ್ ಕಾಡ೯ ನಿಡುತ್ತಾರೆ ಎಂದೆ, ಅದಕ್ಕೆ ಅವನು ನನ್ನದು ಐಸಿಐಸಿ ಬ್ಯಾಂಕನದ್ದು ಬೆಂಗಳೂರಿನಲ್ಲಿ ತೆಗೆದುಕೂಂಡಿದ್ದು ಇಲ್ಲಿ ಸಮೀಪ ಎಲ್ಲಿಯೊ ಬ್ರಾಂಚ್ ಕೂಡ ಇಲ್ಲ ಎಂದ, ಅವನ ಆ ಮಾತಿಗೆ ನಾನು ಏನು ಹೇಳಬೇಕು ತಿಳಿಯದೆ ಮೌನವಾದೆ.
                           ಮತ್ತೆ ಕ್ಷಣಗಳ ನಂತರ ಅವನು ತನ್ನ ಹರಿದು ಹೋದ ಪ್ಯಾಂಟ್ ಪಾಕೇಟ್ ತೋರಿಸುತ್ತ "ನೋಡಿ ನಾನು ದಾವಣಗೇರಿಯಿಂದ ಬರುವಾಗ ಬಸ್ ನಲ್ಲಿ ಯಾರೊ ನನ್ನ ಪಾಕೇಟ್ ಕಟ್ ಮಾಡಿ ೧೨೦೦/- ರೂಪಾಯಿ ಮತ್ತು ಏಟಿಮ್ ಕಾಡ೯ ಕದಿದ್ದಾರೆ" ಎಂದು ವಿಷಾದದಿಂದ ನುಡಿದ, ಕಳಿದ ೨ ವಷ೯ಗಳಿಂದ ಬೆಂಗಳುರಿನಲ್ಲಿ ಇರುವ ನಾನು ಅಲ್ಲಿ ಇಂತಹ ನೂರಾರು ವ್ಯಕ್ತಿಗಳನ್ನು ನೋಡಿದ್ದರಿಂದಲೊ ಏನೊ ಅವನಿಂದ ಸ್ವಲ್ಫದೂರ ಸರಿದು ನನ್ನ ಬ್ಯಾಗ್ ಗಳ್ಳನ್ನು ಭದ್ರವಾಗಿ ಹಿಡಿದುಕೊಂಡೆ.
                         ಕೆಲಕ್ಷಣಗಳ ಮೌನದ ನಂತರ ಮತ್ತೆ ಮಾತು ಆರಂಬಿಸದ ಅವನು "ನನ್ನ ಹತ್ತಿರ ಒಂದು ರೂಪಾಯಿ ಕೂಡ ಇಲ್ಲ ಊರಿಗೆ ಹೇಗೆ ಹೂಗಬೇಕು ಗೋತ್ತಿಲ್ಲ ನಮ್ಮೂರಿನ ಯಾರಾದರು ಪರಿಚಯದವರು ಸಿಕ್ಕರೆ ಅವರ ಸಹಾಯದಿಂದ ಊರಿಗೆ ಹೂಗುತ್ತೇನೆ ಇಲ್ಲವಾದರೆ ದೇವರೆ ನನಗೆ ಗತಿ" ಅವನ ಆ ಮಾತುಗಳಿಗೆ ಆ ಕ್ಷಣಕ್ಕೆ ಹೇಗೆ ಪ್ರತಿಕ್ರಿಯಸಬೇಕು ಎಂದು ತಿಳಿಯದೆ ಮೌನವಾಗಿದ್ದೆ, ಕೇಲವೆ ಕ್ಷಣಗಳಲ್ಲಿ ನಮ್ಮುರಿಗೆ ಹೂಗುವ ಬಸ್ ಬಂತು, ಸಂಜೆಯ ಸಮಯವಾಗಿದ್ದರಿಂದ ಬಸ್ ವೀಪರಿತ ರಷ್ ಇತ್ತು, ಬಸ್ ನವರೆಗು ನನ್ನ ಜೋತೆ ಬಂದ ಆತ ಆತ ನಾನು ಬಸ್ ಹತ್ತಿದ ನಂತರ ಮರಳಿ ಕತ್ತಲೆಯಲಿ ಹೊರಟು ಹೊದ,
               ಬಸ್ ಹತ್ತಿದ ನಂತರ ನಾನು ಮಾಡಿದ ಮೊದಲ ಕೇಲಸ ನನ್ನ ಎಲ್ಲಾ ಬ್ಯಾಗ್ ನನ್ನ ಪಾಕೇಟ್ ಮತ್ತು ಮೊಬೈಲ್ ಇದೆಯೂ ಇಲ್ಲವೊ ಎಂದು ಚೆಕ್ಕ ಮಾಡಿದೆ, ಎಲ್ಲವು ಸರಿಯಾಗಿಯೆ ಇತ್ತು, ಆ ಕ್ಷಣಕ್ಕೆ ನನಗೆ ಬೇಸರವಾಯಿತು ಸುಮ್ಮನೆ ಒಬ್ಬ ವ್ಯಕ್ತಿಯ ಮೇಲೆ ಅನುಮಾನಿಸಿದೆ ಅನಿಸಿತು.
                   ಅವನು ಹೆಳೀದ್ದು ನಿಜ ಇರಬಹುದೆ? ಅವನಿಗೆ ನಿಜವಾಗಲು ಸಹಾಯದ ಅವಶ್ಯಕತೆ ಇತ್ತೆ? ನನ್ನ ಮನಸ್ಸು ಗೊಂದಲದಲ್ಲಿ ಇತ್ತು, ಬೆಂಗಳುರಿನಿಂದ ರಾಣೇಬೆನ್ನುರಿಗೆ ಬರುವಾಗ ರೈಲಿನಲ್ಲಿ ಕೂಲ್ ಡ್ರಿಂಕ್ಸ್, ಬೀಸ್ಕತ್ ಎಂದು ೧೦೦ಕ್ಕು ಅದಿಕ ಹಣ ಖಚು೯ ಮಾಡಿದ್ದೆ ಅವನಿಗೆ ೨೦ ರಿಂದ ೩೦ ರೂಪಾಯಿ ನಿಡಿದ್ದರೆ ನಾನು ಏನು ಕಳೆದುಕೊಳೊತ್ತಿರಲಿಲ್ಲ.
                ಎಲ್ಲಿಯೊ ನನಗೆ ಸಹಾಯ ಮಾಡಿ, ಹಣ ನೀಡಿ ಎಂದು ಕೇಳದ ಆ ಅಪರಿಚಿತ ವ್ಯಕ್ತಿಯ ಬಗ್ಗೆ ಕೇಟ್ಟದಾಗಿ ಅನುಮಾನಿಸಿ ನಾನು ತಪ್ಪು ಮಾಡಿದೆನಾ? ಈಗಲು ನನ್ನ ಮನಸ್ಸಿನಲ್ಲಿ ಕೇವಲ ಒಂದೇ ಪ್ರಶ್ನೆ ’ಅವನಿಗೆ ಸಹಾಯ ಮಾಡದೆ ನಾನು ತಪ್ಪು ಮಾಡಿದನಾ? ಅಥಾವ ನಾನು ಮಾಡಿದ್ದೆ ಸರಿನಾ?

4 comments:

  1. kanditavaagiyu tappu....aadre idu sahaja...sanje,kattalu,power illa aa time nalli hige yaradru heLidre doubt barodu sahaja...aadru ond 30 rupaayi kottididre chennagirutittu anisutte....

    ReplyDelete
  2. nenu bangalore nalli edde alwa adke atra think madediya ashte....

    ReplyDelete

ಒಂದು ಊರಿನ ಕಥೆ

ನನಗೆ ನನ್ನ ಸ್ನೇಹಿತರು ಅತಿ ಹೆಚ್ಚು ಕೇಳಿರಿವ ಪ್ರಶ್ನೆ ಅಂದರೆ, ನಿಮ್ಮ ಊರಿಗೆ ರಾಣೇಬೆನ್ನೂರು ಎಂದು ಹೆಸರು ಹೇಗೆ ಬಂತು? ಎಂದು, ಅದಕ್ಕೆ ಒಂದು ಭವ್ಯವಾದ ಐತಿಹಾಸಿಕ ಕಥೆ...