Saturday, May 25, 2013

ನಾನು ಕವಿ

ಅಂದು ನಾನು ಬಾಲವಿಲ್ಲದ ಕಪಿ
ಇಂದು ನಾನು ಪ್ರಾಸವಿಲ್ಲದ ಕವಿ

ಕಪಿಗು ಕವಿಗು ಇಲ್ಲ ಅಂತರ
ಇಬ್ಬರದು ಒಂದೇ ತಂತರ

ಕಪಿಯ ಆತುರ ಕವಿಯಂತೆ
ಕವಿಯ ಕೌತುಕ ಕಪಿಯಂತೆ

ಕಪಿಗೆ ಕಂಡೆದೆಲ್ಲೆ ಹಿಡಿಯುವ ಆತುರ
ಕವಿಗೆ ಕಂಡೆದೆಲ್ಲೆ ಬರೆಯುವ ಕಾತುರ

ಕಪಿಗಳೆಲ್ಲ ಸೇರಿದರೆ ಕಪಿಚೇಷ್ಟಿ
ಕವಿಗಳೆಲ್ಲ ಸೇರಿದರೆ ಕವಿಗೋಷ್ಠಿ

ಕಪಿಗಳಿಗೆ ಮುಗಿಯದ ತುರಿತ
ಕವಿಗಳದು ಮುಗಿಯದ ಕೊರೆತ

ಬರೆದೆ ಕಪಿಗಳ ಮೇಲೆ ಕವಿತೆ
ಆದರು ಓದಲಿಲ್ಲ ಜನತೆ

ಒಂದಂತು ನಿಜ ನಾನ್ನಲ್ಲ ಕಪಿ
ನಾನು ಪ್ರಾಸವಿಲ್ಲದ ಕವಿ

Saturday, May 18, 2013

ಯಾರದೂ ಸಾಲುಗಳು... ಇನ್ನಾರಿಗೊ ಸಾಲವಾಗಿ


ಇಷ್ಟವಿಲ್ಲದಿದ್ದರು ದಿನವು ಕಲೇಜಿಗೆ ಬರುತಿದ್ದೆ,
ಅದು ನನಗೆ ಖುಶಿ ನಿಡುತಿತ್ತು
ಅದು ನಿನಗಾಗಿ
ನಿನ್ನ ಕಣ್ಣುಗಳಿಗಾಗಿ
ಅಂಥ ಕಣ್ಣುಗಳನ್ನು ಬೇರೆಲ್ಲೂ ನೋಡಿರಲಿಲ್ಲ
ನಿ ಮುಂದೆ... ನಾ ಹಿಂದೆ
ನಾ ಹಿಂದೆ... ನಿ ಮುಂದೆ
ಬೇನ್ನಿಗು ಕಣ್ಣುಗಳಿದಿದ್ದರೆ ಎಷ್ಟು ಚಂದ?
ಎಲ್ಲದಕ್ಕು ಒಂದು ಲಿಮೀಟ್ ಇರಬೇಕು
ಕನಸುಗಳು ಬೇಡವೇಂದರು ನನ್ನ ಹಿಂದೆ ಬಿದಿದ್ದವು
ನಿನಗೆ ಹಾರುವ ಕನಸು... ದೂರ ತುಂಬಾ ದೂರ..
ಕಾಡು, ನಾಡು, ಬೇಟ್ಟ ಎಲ್ಲವನ್ನು ದಾಟಿ ದೂರ...
ದುಬೈ, ಲಂಡನ್, ನ್ಯೂಯಾಕೋ೯ ಇನ್ನೆಲ್ಲಿಗೂ
ನೀನು ಕನಸುಗಳ ಹಿಂದೆ ಬಿದ್ದೆ
ಕನಸುಗಳಿಗೆ ರೆಕ್ಕೆ ಮುಡಿದವು
ಏಳು ಸಮುದ್ರಗಳಾಚೆಯಿಂದ ರಾಜಕುಮಾರ ಹಾರಿ ಬಂದ
ಅವನು ಮಾಯಾವಿ
ಕೈ ಬೆರಳಿನಲ್ಲಿ ಪ್ರಪಂಚ ತೋರಿಸುವ ಚತುರ
ಬೀಜವಿಲ್ಲದೆ ಗಿಡ-ಮರಗಳ ಬೇಳೆಸುವ ಚತುರ
ಡಾಲರ್ ರುಪಾಯಿಗಳ ನುಂಗುತ್ತದೆ
ಡಾಲರ್ ಸಂಬಂದಗಳನ್ನು ನುಂಗುತ್ತದೆ
ಡಾಲರ್ ನಿನ್ನ ಕೊರಳಿಗೆ ಸುತಿತ್ತು
ಡಾಲರ್ ನಿನ್ನ ಹಣೆಯ ಮೇಲಿತ್ತು.
ಸಮುದ್ರ ದಾಟಲು ಬೇಕು ಬಲವಾದ ರೆಕ್ಕೆಗಳು
ವಿಮಾನ ಲೋಹದ ರೆಕ್ಕೆಗಳಿರುವ ಹಕ್ಕಿ
ಅದರಲ್ಲಿ ಕುಳಿತಾಗ ನಿನ್ನ ಮುಖದಲ್ಲಿ ಸಂಭ್ರಮದಾ ಕಾಮನಬಿಲ್ಲು
ರೆಕ್ಕೆ ಮುಡಿದವರನ್ನು ಭೂಮಿಯ ಮೇಲಿರುವವರು ಹಿಡಿಯುವುದು ಸುಲಭವಲ್ಲ.
ಟಾಟಾ....    ಬೈಬೈ.......  ಸೀಯೂ.........
ಅಲ್ಪ ವಿರಾಮ,  ವಿರಾಮ,  ಪೂಣ೯ ವಿರಾಮ.

(ಸಾಲುಗಳನ್ನುಸಾಲ ಕೊಟ್ಟವರು:- ಹಾಯ್ ಬೆಂಗಳೂರ್)

ಒಂದು ಊರಿನ ಕಥೆ

ನನಗೆ ನನ್ನ ಸ್ನೇಹಿತರು ಅತಿ ಹೆಚ್ಚು ಕೇಳಿರಿವ ಪ್ರಶ್ನೆ ಅಂದರೆ, ನಿಮ್ಮ ಊರಿಗೆ ರಾಣೇಬೆನ್ನೂರು ಎಂದು ಹೆಸರು ಹೇಗೆ ಬಂತು? ಎಂದು, ಅದಕ್ಕೆ ಒಂದು ಭವ್ಯವಾದ ಐತಿಹಾಸಿಕ ಕಥೆ...