Monday, February 21, 2011

ಕನಸು



              ಅಂದೊಂದು ಸಣ್ಣ ಹಳ್ಳಿ, ಹಳ್ಳಿಯ ಮದ್ಯ ಚಿಕ್ಕದಾದ ಒಂದು ಸುಂದರ ಕೆರೆ, ಊರಿನ ಪಕ್ಕ ಒಂದು ಸಣ್ಣ ಬೆಟ್ಟ, ಬೆಟ್ಟದ ಮೇಲೆ ಚಿಕ್ಕದಾದ ಶಿವನ ಮಂದಿರ, ಊರಿನ ಬಹುತೇಕ ಜನ ಸೋಮವಾರದಂದು ಆ ಮಂದಿರಕ್ಕೆ ಹೋಗಿ ಪೂಜೆ ಸಲ್ಲಿಸುವದು ವಾಡಿಕೆ.
            ಅಂದೂಂದು ಸೋಮವಾರದ ಸಂಜೆ ಊರಿನ ಯುವಕನೂಬ್ಬ ಶಿವನ ಪೂಜೆಗೆಂದು ಬೆಟ್ಟಕೆ ಹೊರಟ್ಟಿರುತ್ತಾನೆ ಕೈಯಲ್ಲಿ ದೇವರಿಗೆಂದು ತೆಂಗಿನಕಾಯಿ, ಬಾಳೆಹಣ್ಣು ಮತ್ತು ಕಪೂ೯ರವನ್ನು ಹೂಂದಿರುವ ಸಣ್ಣ ಕೈ ಚೀಲವನ್ನು ತೆಗೆದೂಕೂಂಡು ಹೂಗುತ್ತಿದ್ದಾನೆ, ಸ್ವಲ್ಪದೂರ ಹೂದ ನಂತರ ಅವನ ಕಣ್ಣಿಗೆ ಒಬ್ಬ ಯುವತಿ ಕಾಣುತ್ತಾಳೆ, ಚಿಕ್ಕ ಮಕ್ಕಳೊಂದಿಗೆ ಅಂಗಳದಲ್ಲಿ ಆಡುತ್ತಿರುವ ಆ ಯುವತಿಯನ್ನು ಕಂಡು ಒಂದು ಕ್ಷಣ ಈ ಯುವಕ ನಿಂತು ಅವಳನ್ನೆ ದಿಟ್ಟಿಸಿ ನೋಡುತಿದ್ದಾನೆ.
             ಆ ಗಾಡ ಕಪ್ಪು ಕಣ್ಣುಗಳು, ಸುಂದರವಾದ ಮುಖ, ಆ ಎತ್ತರವಾದ ನಿಲವು, ಬೆಳದಿಂಗಳ ಹಾಲು ಬೆಳಕಿನಂತೆ ಉಕ್ಕವ ನಗು, ಅವಳ ಸೌಂದರ್ಯವನ್ನು ಕಂಡು ಒಂದು ಕ್ಷಣ ಆ ಯುವಕ ಮಂತ್ರ ಮುಗ್ದನಂತೆ ನಿಂತು ಬಿಟ್ಟ, ಅವನ ಮನದಲ್ಲಿ ಒಂದು ಕ್ಷಣಕ್ಕೆ ಮಿಂಚಿನ ಸಂಚಾರ ಅರೆ ಈ ಸುಂದರಿಯನ್ನು ನಾನು ಎಲ್ಲೂ ನೋಡಿರುವೆ ಆದರೆ ಎಲ್ಲಿ? ಪಕ್ಕದ ಮನೆಯ ಹುಡಗಿಯೆ? ಪಕ್ಕದ ಓಣಿಯ ಹುಡಗಿಯೆ? ಅಥವಾ ದೂರದ ಸಂಭಂದಿಯೆ? ಛೇ....ಎಷ್ಟೆ ಪ್ರಯತ್ನಿಸಿದರು ಆ ಯುವಕನಿಗೆ ಏನು ನೆನೆಪಾಗಲಿಲ್ಲ ಆದರೆ ಅವಳ ಮುಖ ಮಾತ್ರ ಪರಿಚಯದ್ದು.
             ಏನಾದರು ಆಗಲಿ ಎಂದು ಹತ್ತಿರ ಹೂರಟ ಯುವಕನನ್ನು ದೂರದಿಂದ ಗಮನಿಸಿದ ಯುವತಿ ಯುವಕನೆಡೆಗೆ ಮುಗಳು ನಗೆಯನ್ನು ಚಲ್ಲಿದಳು ಯುವಕನಿಗೂ ಪುಳಕ ಪರಿಚಯದವರಂತೆ ಮಾತನಾಡಿಸಿದ ಯುವತಿ ಯುವಕನಿಗೆ ಎಲ್ಲಿಗೆ ಹೂರಟಿರುವೆ ಎಂದು ಕೇಳಿದಳು, ಯುವಕ ಬೆಟ್ಟದ ದೆವಸ್ಥಾನಕ್ಕೆ ಹೂರಟಿರುವ ವಿಷಯ ತಿಳಿಸಿದ ಅದನ್ನು ಕೇಳಿದ ಯುವತಿ ಜೋತೆಗೆ ನಾನು ಬರಬಹುದೆ ಏಂದು ಕೇಳಿದಳು, ಅತೀವ ಸಂತೋಷದಿಂದ ಅವಳಿಗೆ ಒಪ್ಪಿಗೆ  ಸೂಚಿಸಿದ.
                   ಮುಸ್ಸಂಜೆಯ ಆ ತಂಪು ಸಮಯದಲ್ಲಿ ಈ ಯುವ ಜೋಡಿ ಹೂರಟಿತು, ಮುಸ್ಸಂಜೆಯ ಸೂಯ೯ ಬಾನಂಗಳವನ್ನು ಕೆಂಪಾಗಿಸಿದ್ದ, ಈ ಯುವ ಜೋಡಿ ಮಾತಿನ ಮೋಡಿಯಲ್ಲಿ ಮುಳಗಿತ್ತು, ದಾರಿ ಸಾಗಿದ್ದೆ ಗೋತ್ತಾಗಲಿಲ್ಲ ಆಗಲೆ ಅವರು ಅಧ೯ ಬೆಟ್ಟವನ್ನು ಹತ್ತಿಯಾಗಿತ್ತು ಅಲ್ಲಿಂದ ತಿರುಗಿ ನೋಡಿದಾಗ ಆ ಊರಿನ ವಿಹಂಗಮ ನೋಟ ಕಾಣಿಸಿತ್ತು, ಆ ಊರಿನ ಕೆರೆ, ದೇವಸ್ತಾನ ಎಲ್ಲಾ ಸುಂದರವಾಗಿ ಕಾಣಿಸುತ್ತಿದವು, ಅಲ್ಲಿಂದ ಮತ್ತೆ ತಮ್ಮ ಪ್ರಯಾಣವನ್ನು ಮುಂದುವರೆಸಿದರು, ಸ್ವಲ್ಪ ಎತ್ತರ ಏರಿದ ನಂತರ ಹುಡಗಿಗೆ ಸುಸ್ತಾಗತೊಡಗಿತು, ಅವಳು ಯುವಕನಿಗೆ ನನ್ನಿಂದ ಮುಂದೆ ನೆಡೆಯಲು ಅಗದು ಎಂದಳು ಯುವಕ ಅವಳಿಗೆ ಸ್ವಲ್ಪ ದೂರ ನೆಡೆಯುವಂತೆ ವಿನಂತಿಸಿಕೂಂಡ ಆದರೆ ಅವಳು ನಿರಾಕರಿಸಿಬಿಟ್ಟಳು, ಯುವಕನಿಗೆ ಧಮ೯ಸಂಕಟ ಅವಳನ್ನು ಅಲ್ಲಿಯೆ ಬಿಟ್ಟು ಹೂಗುವ ಹಾಗಿಲ್ಲ, ಅವಳು ಇವನ ಜೋತೆ ನೆಡೆಯಲು ಸಿದ್ದವಿಲ್ಲ, ಕೊನೆಗೆ ಬಹು ಚಚೆ೯ಗಳ ನಂತರ ಯುವತಿ ಯುವಕನಿಗೆ ತನ್ನನ್ನು ಎತ್ತಿಕೊಂಡು ಹೂಗುವಂತೆ ವಿನಂತಿಸಿಕೊಳುತ್ತಾಳೆ.
           ಯುವಕನಿಗೂ ಪುಳಕ ಸುಂದರವಾದ ಯುವತಿ ಯಾರೆಂದು ತಿಳಿಯದು, ಇಗ ಅವಳನ್ನು ಎತ್ತಿಕೊಂಡು ಬೆಟ್ಟ ಹತ್ತುವ ಅವಕಾಶ ಸಿಕ್ಕಿದೆ ಹೆಗೆತ್ತಾನೆ ನಿರಾಕರಿಸಿಯಾನು? ಅವನು ಅವಳ ಮಾತಿಗೆ ಒಪ್ಪಿ ಅವಳನ್ನು ತನ್ನ ಬಾಹುಗಳಲ್ಲಿ ಎತ್ತಿಕೂಳ್ಳಲು ಅವಳೆಡೆಗೆ ನೆಡೆದ ಆದರೆ ಇದ್ದಕ್ಕಿಂದತಲೆ ಇಲ್ಲಿಂದಲೂ ಬಾರಿ ಶಬ್ದ ಕೆಳಿಸತೂಡಗಿತು, ಯುವಕನಿಗೂ ಶಬ್ದ ಕೇಳಿ ಅಚ್ಚರಿ ಎಲ್ಲಿಂದ ಇದು ಬರುತ್ತಿದೆ ಎಂದು ಸುತ್ತಲು ನೋಡತೂಡಗಿದ ಅಷ್ಟರಲ್ಲೆ ದೂರದ ಒಂದೂಂದೆ ವಸ್ತುಗಳು, ಮರಗಳು, ಮನೆಗಳು ಮಾಯವಾಗತೂಡಗಿದವು, ಶಬ್ದವು ತಿವ್ರವಾಗ ತೂಡಗಿತು,ಯುವಕನಿಗೆ ಏನಾಗುತ್ತಿದೆ ಎಂದು ಅಥ೯ವಾಗಲಿಲ್ಲ ಅಷ್ಟರಲ್ಲೆ ನಿಧಾನವಾಗಿ ಬೆಟ್ಟ ಕರಗತೊಡಗಿತು, ಕೂನೆಗೆ ಆ ಸುಂದರ ಯುವತಿ ಕೂಡ ಬೆಳದಿಂಗಳ ಬೆಳಕಿನಂತೆ, ಸೂಯ೯ನ ಎದರು ಮುಂಜಾನೆಯ ಮಂಜಿನಂತೆ ಕರಗಿ ಹೋದಳು, ಶಬ್ದದ ತಿವ್ರತೆ ವಿಪರಿತವಾಯಿತು ಅಷ್ಟರಲ್ಲಿಯೆ ಯುವಕನತಲೆಗೆ ಯಾರೂ ಭಲವಾಗಿ ಹೂಡೆದಂತೆ ಬಾಸವಾಯಿತು, ಭಯದಿಂದ ಕಣ್ಣು ಬಿಟ್ಟು ನೋಡಿದರೆ ತಲೆಗೆ ಹೊಡೆದಿದ್ದು ನನ್ನ ಅಮ್ಮ, ತೀವ್ರ ಶಬ್ದ ಬರುತ್ತಿದದ್ದು ನನ್ನ ಮೂಬೈಲ್ ನ ಅಲಾರಮ್ ನಿಂದ, ಬೇಗ ಏಳು ಎಂದು ಅಮ್ಮ ಎಚ್ಚರಿಸಿ ಹೂರ ಹೋದರು, ನಾನು ನನ್ನ ಅದ್ರುಷ್ಟವನ್ನು ಶಪಿಸುತ್ತಾಕೂಳಿತೆ.
              ಛೇ ಇನ್ನು ಸ್ವಲ್ಪ ಹೂತ್ತಿನಲ್ಲೆ ನಾನು ಆ ಸುಂದರ ಯುವತಿಯನ್ನು ನನ್ನ ಭಾಹುಗಳಲ್ಲಿ ಎತ್ತಿಕೂಳುತಿದ್ದೆ ಆದರೆ.......  ಅದಕೆ ನಾಳೆಯಿಂದ ಅಲಾರಮ್ ನ್ನು ಅಧ೯ಗಂಟೆ ತಡವಾಗಿ ಇಡಬೇಕು ಎಂದು ನಿಧ೯ರಿಸಿರುವೆ ಮತ್ತು ಅಮ್ಮನಿಗೆ ಯಾವುದೆ ಕಾರಣಕ್ಕು ಬೆಳಗಿನ ನನ್ನ ನಿದ್ರೆಗೆ ಭಂಗ ತರಬಾರದು ಎಂದು ಹೆಳಿರುವೆ.
             ಮತ್ತೆ ಅದೇ ಆ ಹುಡಗಿಯ ಆಗಮನದ ನೀರಿಕ್ಷೆಯಲ್ಲಿನ್ ನಿದ್ರೆಗೆ ಜಾರುತ್ತಿರುವೆ...........


Sunday, February 13, 2011

ನಮ್ಮುರ ಜಾತ್ರೆ

                         ನಮ್ಮುರು ಉತ್ತರ ಕನಾ೯ಟಕದ ಬಯಲು ಸೀಮೆಯ ಒಂದು ಚಿಕ್ಕ ಗ್ರಾಮ, ನಮ್ಮರಿನಲ್ಲಿ ಪ್ರತಿ ವಷ೯ವು ಫ಼ೆಬ್ರುವರಿ ತಿಂಗಳಿನಲ್ಲಿ ಗ್ರಾಮ ದೇವರಾದ ಶ್ರೀ ಬಸವೇಶ್ವರ ದೇವರ ಜಾತ್ರೆಯು ನೆಡೆಯುತ್ತದೆ, ಬಾಲ್ಯದಿಂದಲು ನನಗೆ ನಮ್ಮುರ ಜಾತ್ರೆ ಎಂದರೆ ತುಂಬಾ ಪ್ರೀತಿ, ಉತ್ಸಾಹ, ವಷ೯ಪೂತಿ೯ ನೆನಪಿಡುವಷ್ಟು ತರಲೆ, ಸಂತಸ, ಸಂಭ್ರಮವನ್ನು ನನ್ನಲ್ಲಿ ಉಂಟು ಮಾಡುತ್ತದೆ,
     ಅಂದು ಬೆಳ್ಳಗೆ ಎಲ್ಲರ ಮನೆಯಲ್ಲಿ ಬೆಳಗಿನ ಜಾವ ಬೇಗ ಏದ್ದು ಮನೆ ಅಂಗಳಕೆ ರಂಗೋಲಿ ಹಾಕಿದರೆ, ಊರಿನ ಹಿರಿಯರು ಬೆಳ್ಳಗೆ 6 ಘಂಟೆಗೆ ದೇವಸ್ತಾನದ ಹತ್ತಿರ ಸೇರಿ ರಥವನ್ನು ಸಿಂಗಾರಿಸುತ್ತಾರೆ, ಬೆಳ್ಳಗೆ 8 ಘಂಟೆಗೆ ಊರಿನ ಜನೆರೆಲ್ಲ ದೇವಸ್ತಾನದ ಹತ್ತಿರ ಸೇರಿ ರಥ ಎಳೆಯೆಲು ತಯಾರಾಗುತ್ತಾರೆ, ದೆವಸ್ತಾನದ ಪುಜಾರಿ ರಥಕ್ಕೆ ಪೊಜೆ ಮಾಡಿ ರಥದ ಗಾಲಿಗೆ ತೆಂಗಿನಕಾಯಿ ಒಡೆವುದರೊಂದಿಗೆ ರಥ ಏಳೆಯಲು ಅನುಮತಿ ನಿಡುತ್ತಾನೆ, ಊರಿನ ಪ್ರಮುಖ ಬಿದಿಗಳಲ್ಲಿ ಸಾಗುವ ರಥ ಕೋನೆಗೆ ಊರಾಚೆ ಬರಮದೇವರ ದೇವಸ್ತಾನದವರೆಗು ಸಾಗುತ್ತದೆ, ದಾರಿ ಮದ್ಯ ರಥದ ಕಳಶಕ್ಕೆ ಗುರಿ ಇಟ್ಟು ಬಾಳೆ ಹಣ್ಣು ಏಸೆಯುತ್ತಾರೆ, ಮನದಲ್ಲಿ ಏನಾದರು ಬೇಡಿಕೊಂಡು ನಂತರ ಹಣ್ಣನ್ನು ಕಳಶಕ್ಕೆ ಗುರಿ ಇಟ್ಟು ಏಸೆಯುತ್ತಾರೆ, ಹಣ್ಣು ಕಳಾಶಕ್ಕೆ ತಾಗಿದರೆ ಮನದ ಆಸೆ ಇಡೆರುತ್ತೆ ಎಂಬ ನಂಬಿಕೆ ಜನರಲ್ಲಿ ಇದೆ, ಬೆಳ್ಳಗೆ 11 ರವರೆಗೆ ರಥ ಎಳೆಯುವ ಸಂಬ್ರಮವಾದರೆ ನಂತರ ಬಸವ ದೇವರ ಗುಗ್ಗಳ ಜರುಗುತ್ತದೆ, ನಂತರ ಊಟದ ಬಿಡಿವು.
        ಸಂಜೆ 4ಕ್ಕೆ ಮತ್ತೆ ಸಂಬ್ರಮ, ಸಿಂಗರಿಸಿದ ಸಾಲು ಸಾಲು ಏತ್ತುಗಳ ಜೋತೆ ಬಂಡಿ ಮೆರವಣಿಗೆ ಆರಂಭವಾಗುತ್ತೆ ಅದರ ಮುಂದೆ ಡೋಳ್ಳು ಕುಣಿತ ಹಾಹಾ ನೊಡಲು ಎರಡು ಕಣ್ಣು ಸಾಲದು, ಸಂಜೆ ಸಂಗೀತ ಕಾಯ೯ಕ್ರಮ ಜನರ ಕೋರಿಕೆಗಳನ್ನು ಹಾಡುವ ಗಾಯಕರು, ಅದಕ್ಕೆ ತಕ್ಕತ್ತೆ ಕುಣಿಯುವ ಹುಡಗಿ, ಕೋಲು ಕೊದರೆ, ಅವೆರಡನ್ನು ನೋಡಿ ಕುಣಿಯುವ ಪೆಡ್ಡೆ ಜನರು ಒಟ್ಟಿನಲ್ಲಿ ಸಂಬ್ರಮಹೊ ಸಂಬ್ರಮ.
        ಇನ್ನು ಜಾತ್ರೆ ಎರಡು ತಿಂಗಳು ಇದೆ ಎಂದಾಗಲೆ ಜಾತ್ರೆಯ ದಿನ ಮಾಡುವ ನಾಟಕದ ತಾಲಿಮು ಆರಂಭವಾರುತ್ತೆ, ಸಿನಮಾ ಟಿವಿ ಅಬ್ಬರದಲ್ಲಿ ಇಂದು ನಾಟಕಗಳು ಅಳಿಸಿಹೋಗಿವೆ ಆದರೆ ನನ್ನ ಊರಿನಲ್ಲಿ ಮಾತ್ರ ಇಂದಿಗು ವಷ೯ಕ್ಕೂಂದು ಬಾರಿ ಜಾತ್ರಿ ದಿನ ಅಪ್ಪಟ ಉತ್ತರ ಕನಾ೯ಟಕದ ನಾಟಕ ನೊಡಲು ಸಿಗುತ್ತೆದೆ, ರಾತ್ರಿ 10 ಕ್ಕೆ ಆರಂಭವಾಗುವ ನಾಟಕ ಮುಗಿಯುವದು ಬೆಳ್ಳಗೆ 5 ಗಂಟೆಗೆ.
       ಇನ್ನು ಮನೆಯಂತು ಬಂದು ಬಳಗಗಳಿಂದ ತುಂಬಿರುತ್ತದೆ, ಚಕ್ಕಮಕ್ಕಳಂತು ಜಾತ್ರೆಗೆ ಬಂದು ವಿವಿದ ಆಟಗಲ್ಲಲ್ಲಿ ಮಗ್ನರಾದರೆ  ಯುವಕ-ಯುವತಿಯರು ತಮ್ಮದೆ ಲೋಕದಲ್ಲಿ ಮುಳಿಗಿರುತ್ತರೆ, ಓದು, ಕೆಲಸ ಹೀಗೆ ಬೇರೆ ಬೇರೆ ಕಾರಣಗಳಿಂದ ಊರಚೆ ನೆಲೆಸಿರುವ ಎಲ್ಲರು ಅಂದು ಸೇರುವುದರಿಂದ ಅಂದೊಂದು ರೀತಿ ಗಳಯರ ಸಮ್ಮೆಳನವಾಗಿರುತ್ತೆ ಹೀಗೆ ಒಟ್ಟಿನಲ್ಲಿ ಬೇಳಗಿನಿಂದ ರಾತ್ರಿವರೆಗು ಮಜವೊ ಮಜ.
    ಅಮ್ಮ ಇಂದು ಪೋನ್ ಮಾಡಿ ಈ ವಷ೯ದ ಜಾತ್ರೆ ಇದೆ ತಿಂಗಳು 28ಕ್ಕೆ ಎಂದಗ ಮನದಲ್ಲಿ ಹಾಗೆಯೆ ಹಿಂದಿನ ನೆನಪುಗಳು ಮುಡಿದವು, ನಾನಂತು ಬಾಲ್ಯದಲ್ಲಿ ನಮ್ಮುರ ಜಾತ್ರೆಯನ್ನು ತುಂಬಾ Enjoy ಮಾಡುತೆದ್ದೆ ಇಗಲು ಅದೆ ಹುರುಪಿನೊಂದಿಗೆ ಊರಿಗೆ ಹೊಗಲು Ready ಆಗುತಿದ್ದೆನೆ.

Saturday, February 12, 2011

ನಾನು ಮಾಡಿದ್ದು ಸರಿನಾ.........................?


                       ಆವತ್ತು ಬೆಂಗಳೂರಿನಿಂದ ಊರಿಗೆ ಬರುತಿದ್ದೆ, ಬೆಂಗಳೂರಿನಿಂದ ಹುಬ್ಬಳ್ಳಿ ಇಂಟರ್ ಸಿ ಟಿ ಟ್ರೈನ್ ಮುಲಕ ರಾಣೇಬೆನ್ನೊರಿಗೆ ಬಂದಾಗ ಸಂಜೆ ೭.೧೦, ರೈಲ್ವೇ ಸ್ಟೆಷನಿಂದ ಬಸ್ ಸ್ಟಾಂಡಗೆ ಬಂದಾಗ ೭.೩೦ ಆಗಿತ್ತು ಬೇಸಿಗೆ ಆದ ಕಾರಣ ಅನಿಯತ್ರಿತ್ ಲೋಡ್ ಶೇಡಿಂಗ್ ಇತ್ತು, ಅಂದು ಸಂಜೆ ಕೊಡ ಕರೆಂಟ್ ಇರಲಿಲ್ಲ, ನಾನು ನಮ್ಮುರ ಕಡೆ ಬಸ್ ಗಾಗಿ ಕಾಯುತ್ತಾ ಬಸ್ ಸ್ಟಂಡನಲ್ಲಿ ನಿಂತಿದ್ದೆ, ಯಾರ ಮುಖಗಳು ಸ್ಪಷ್ಟ್ವ ವಾಗಿ ಕಾಣುತಿರಲಿಲ್ಲ, ಅಲ್ಲಿ ಇದ್ದ ಎಲ್ಲಾ ಮುಖಗಳು ಕೇವಲ ಕಪ್ಪನೆ ಆಕಾರದಂತೆ ಗೂಚರಿಸುತಿದ್ದರು.
               ೨೬-೨೮ ವಷ೯ದ ವಯಸ್ಸಿನ ಒಬ್ಬ ಯುವಕ (ಕತ್ತೆಲೆಯಲ್ಲಿ ಅವನ ಮುಖ ನನಗೆ ಸರಿಯಾಗಿ ಕಾಣುತ್ತಿರಲಿಲ್ಲ) ನನ್ನ ಹತ್ತಿರ ಬಂದು ಸಮಯ ಎಸ್ಟು ಎಂದು ಕೇಳಿದ ನಾನು ಹೇಳಿದೆ ನಂತರ ಕೆಲ ಕ್ಷಣ ಸುಮ್ಮನಿಂದ್ದು ನಂತರ ಎಲ್ಲಿಗೆ ಹೋಗಬೇಕು ಎಂದು ಕೇಳಿದ ನಾನು ನಮ್ಮ ಊರಿನ ಹೇಸರು ಹೇಳಿ ಮರಳಿ ನೀನು ಎಲ್ಲಿಗೆ ಹೋಗಬೇಕು ಏಂದು ಕೇಳಿದೆ ಅದಕ್ಕೆ ಅವನು "ಶಿಕಾರಿಪುರ" ಎಂದ, ಮತ್ತೆ ಕೇಲ ಕ್ಷಣಗಳ ಮೌನದ ನಂತರ ಅವನು ನನಗೆ ಎಟಿಮ್ ಕಾಡ೯ ಕಳಿದು ಹೊದರೆ ಏನು ಮಾಡಬೇಕು ಎಂದು ಕೇಳಿದ ಅದಕೆ ನಾನು ಸಂಬಂದಿಸಿದ ಬ್ಯಾಂಕೀಗೆ ಹೋಗಿ ದೂರು ನೀಡಿ, ಹಳಯ ಎಟಿಮ್ ಕಾಡ೯ ಬ್ಲಾಕ್ ಮಾಡಿ ಅದರ ಬದಲು ಹೊಸಾ ಎಟಿಮ್ ಕಾಡ೯ ನಿಡುತ್ತಾರೆ ಎಂದೆ, ಅದಕ್ಕೆ ಅವನು ನನ್ನದು ಐಸಿಐಸಿ ಬ್ಯಾಂಕನದ್ದು ಬೆಂಗಳೂರಿನಲ್ಲಿ ತೆಗೆದುಕೂಂಡಿದ್ದು ಇಲ್ಲಿ ಸಮೀಪ ಎಲ್ಲಿಯೊ ಬ್ರಾಂಚ್ ಕೂಡ ಇಲ್ಲ ಎಂದ, ಅವನ ಆ ಮಾತಿಗೆ ನಾನು ಏನು ಹೇಳಬೇಕು ತಿಳಿಯದೆ ಮೌನವಾದೆ.
                           ಮತ್ತೆ ಕ್ಷಣಗಳ ನಂತರ ಅವನು ತನ್ನ ಹರಿದು ಹೋದ ಪ್ಯಾಂಟ್ ಪಾಕೇಟ್ ತೋರಿಸುತ್ತ "ನೋಡಿ ನಾನು ದಾವಣಗೇರಿಯಿಂದ ಬರುವಾಗ ಬಸ್ ನಲ್ಲಿ ಯಾರೊ ನನ್ನ ಪಾಕೇಟ್ ಕಟ್ ಮಾಡಿ ೧೨೦೦/- ರೂಪಾಯಿ ಮತ್ತು ಏಟಿಮ್ ಕಾಡ೯ ಕದಿದ್ದಾರೆ" ಎಂದು ವಿಷಾದದಿಂದ ನುಡಿದ, ಕಳಿದ ೨ ವಷ೯ಗಳಿಂದ ಬೆಂಗಳುರಿನಲ್ಲಿ ಇರುವ ನಾನು ಅಲ್ಲಿ ಇಂತಹ ನೂರಾರು ವ್ಯಕ್ತಿಗಳನ್ನು ನೋಡಿದ್ದರಿಂದಲೊ ಏನೊ ಅವನಿಂದ ಸ್ವಲ್ಫದೂರ ಸರಿದು ನನ್ನ ಬ್ಯಾಗ್ ಗಳ್ಳನ್ನು ಭದ್ರವಾಗಿ ಹಿಡಿದುಕೊಂಡೆ.
                         ಕೆಲಕ್ಷಣಗಳ ಮೌನದ ನಂತರ ಮತ್ತೆ ಮಾತು ಆರಂಬಿಸದ ಅವನು "ನನ್ನ ಹತ್ತಿರ ಒಂದು ರೂಪಾಯಿ ಕೂಡ ಇಲ್ಲ ಊರಿಗೆ ಹೇಗೆ ಹೂಗಬೇಕು ಗೋತ್ತಿಲ್ಲ ನಮ್ಮೂರಿನ ಯಾರಾದರು ಪರಿಚಯದವರು ಸಿಕ್ಕರೆ ಅವರ ಸಹಾಯದಿಂದ ಊರಿಗೆ ಹೂಗುತ್ತೇನೆ ಇಲ್ಲವಾದರೆ ದೇವರೆ ನನಗೆ ಗತಿ" ಅವನ ಆ ಮಾತುಗಳಿಗೆ ಆ ಕ್ಷಣಕ್ಕೆ ಹೇಗೆ ಪ್ರತಿಕ್ರಿಯಸಬೇಕು ಎಂದು ತಿಳಿಯದೆ ಮೌನವಾಗಿದ್ದೆ, ಕೇಲವೆ ಕ್ಷಣಗಳಲ್ಲಿ ನಮ್ಮುರಿಗೆ ಹೂಗುವ ಬಸ್ ಬಂತು, ಸಂಜೆಯ ಸಮಯವಾಗಿದ್ದರಿಂದ ಬಸ್ ವೀಪರಿತ ರಷ್ ಇತ್ತು, ಬಸ್ ನವರೆಗು ನನ್ನ ಜೋತೆ ಬಂದ ಆತ ಆತ ನಾನು ಬಸ್ ಹತ್ತಿದ ನಂತರ ಮರಳಿ ಕತ್ತಲೆಯಲಿ ಹೊರಟು ಹೊದ,
               ಬಸ್ ಹತ್ತಿದ ನಂತರ ನಾನು ಮಾಡಿದ ಮೊದಲ ಕೇಲಸ ನನ್ನ ಎಲ್ಲಾ ಬ್ಯಾಗ್ ನನ್ನ ಪಾಕೇಟ್ ಮತ್ತು ಮೊಬೈಲ್ ಇದೆಯೂ ಇಲ್ಲವೊ ಎಂದು ಚೆಕ್ಕ ಮಾಡಿದೆ, ಎಲ್ಲವು ಸರಿಯಾಗಿಯೆ ಇತ್ತು, ಆ ಕ್ಷಣಕ್ಕೆ ನನಗೆ ಬೇಸರವಾಯಿತು ಸುಮ್ಮನೆ ಒಬ್ಬ ವ್ಯಕ್ತಿಯ ಮೇಲೆ ಅನುಮಾನಿಸಿದೆ ಅನಿಸಿತು.
                   ಅವನು ಹೆಳೀದ್ದು ನಿಜ ಇರಬಹುದೆ? ಅವನಿಗೆ ನಿಜವಾಗಲು ಸಹಾಯದ ಅವಶ್ಯಕತೆ ಇತ್ತೆ? ನನ್ನ ಮನಸ್ಸು ಗೊಂದಲದಲ್ಲಿ ಇತ್ತು, ಬೆಂಗಳುರಿನಿಂದ ರಾಣೇಬೆನ್ನುರಿಗೆ ಬರುವಾಗ ರೈಲಿನಲ್ಲಿ ಕೂಲ್ ಡ್ರಿಂಕ್ಸ್, ಬೀಸ್ಕತ್ ಎಂದು ೧೦೦ಕ್ಕು ಅದಿಕ ಹಣ ಖಚು೯ ಮಾಡಿದ್ದೆ ಅವನಿಗೆ ೨೦ ರಿಂದ ೩೦ ರೂಪಾಯಿ ನಿಡಿದ್ದರೆ ನಾನು ಏನು ಕಳೆದುಕೊಳೊತ್ತಿರಲಿಲ್ಲ.
                ಎಲ್ಲಿಯೊ ನನಗೆ ಸಹಾಯ ಮಾಡಿ, ಹಣ ನೀಡಿ ಎಂದು ಕೇಳದ ಆ ಅಪರಿಚಿತ ವ್ಯಕ್ತಿಯ ಬಗ್ಗೆ ಕೇಟ್ಟದಾಗಿ ಅನುಮಾನಿಸಿ ನಾನು ತಪ್ಪು ಮಾಡಿದೆನಾ? ಈಗಲು ನನ್ನ ಮನಸ್ಸಿನಲ್ಲಿ ಕೇವಲ ಒಂದೇ ಪ್ರಶ್ನೆ ’ಅವನಿಗೆ ಸಹಾಯ ಮಾಡದೆ ನಾನು ತಪ್ಪು ಮಾಡಿದನಾ? ಅಥಾವ ನಾನು ಮಾಡಿದ್ದೆ ಸರಿನಾ?

ಹೇ ಹುಡಗಿ............


ಹಾಯ್......
                  sorry ಕಣೀ ನಿನ್ನ ಹೆಸರೆ ನನಗೆ ಗೂತ್ತಿಲ್ಲ ಅದಕ್ಕೆ ನಿನ್ನ "ಹುಡಗಿ" ಅಂತ ಕರೆಯುತ್ತಿರುವದು, ನಾನೆ ನಿನಗೆ ಒಂದು ಹೆಸರು ಇಡೋಣಾ ಅಂತಿನಿ ಆದರೆ ಯಾಹುದು ನಿನಗೆ ಸರಿ ಹೊಂದುತ್ತಿಲ್ಲ ಹೆಸರಿನ ವಿಚಾರ ಬಿಡು ಇವಾಗ ವಿಷಯಕ್ಕೆ ಬರೊಣಾ.....
          ಎಲ್ಲಾ ಹುಡುಗರ ಹಾಗೆ ನಾನು ಕೊಡ ನನ್ನ ಕನಸಿನ ಹುಡಗಿಯ ಬಗ್ಗೆ ನುರಾರು ಕಲ್ಪನೆಗಳನ್ನು ಹೂಂದಿದ್ದೆ, 5’6’’ ನಿಂದ 5’8” ಏತ್ತರ, ತಳ್ಳಗೆ, ಬೆಳ್ಳಗೆ ರಸ್ತೆಯಲ್ಲಿ ಅವಳು ಹೊಗ್ತಾ ಇದ್ರೆ ಏಲ್ಲರು ನನ್ನ ಹುಡಗಿನೆ ನೊಡ ಬೇಕು, ನಾನು ಏಷ್ಟ್ ಬೆಜಾರಲ್ಲಿ ಇದ್ದರು ಅವಳ  ಮುಖ ನೋಡಿದ ಕ್ಷಣ ಏಲ್ಲಾ ಮರೆತು ಬಿಡಬೇಕು ಹೇಗೆ ನುರಾರು ಕಲ್ಪನೆಗಳೂ ಇದ್ದವು..
        ಮೇಲಿನ ನನ್ನ ಕಲ್ಪನೆಗಳಲ್ಲಿ ಇರುವ ಯಾವುದೆ ಗುಣ ಇರದ ನೀನು ಅದು ಹೇಗೆ ನನ್ನ ಮನಸ್ಸಿಗೆ ಲಗ್ಗೆ ಇಟ್ಟೆ? ಸುಂದರವಾಗಿ ಇರುವ ಹುಡಗಿಯರನ್ನು ನೋಡಿದಾಗಲೆಲ್ಲ ಅವರನ್ನು ಮನಸ್ಸು ಇಷ್ಟಪಡುವದು ಸಹಜ ಆದರೆ ಕೆಲ ಸಮಯಗಳ ನಂತರ ಅಡ್ರೆಸ್ ಇಲ್ಲದ ಹಾಗೆ ಹೋಗಿ ಬಿಡುತ್ತಾರೆ ಆದರೆ ನೀನ್ಯಕೆ ಇನ್ನೂ ಹೋಗಿಲ್ಲ? ಯಾಕೆ ನನ್ನ ಮನಸ್ಸಿಗೆ ಇಷ್ಟೊಂದು ಕಾಡಿಸುತ್ತಾ ಇದ್ದಿಯಾ?
       ಪಾಪ ಇದರಲ್ಲಿ ನಿನ್ನ ತಪ್ಪು ಏನು ಇಲ್ಲ ಬಿಡು, ನಿನು ಯಾವತ್ತು ನನ್ನ ಮುಖ ಕೂಡ ಸರಿಯಾಗಿ ನೋಡೆ ಇಲ್ಲ ಇನ್ನು "smile" ಕೊಡುವದು ದುರದ ಮಾತು ನಾನೆ ದಿನಾ ನಿನ್ನ ಮುಖ ನೋಡಿ ನೋಡಿ ಏನೇನೊ ಕಲ್ಪಸಿ ಕೊಳ್ತಾ ಇದ್ದೆನೆ
       ಒಂದು ಸಾರಿ ನಿನ್ನ ಎದುರಿಗೆ ಬಂದು "ಹಾಯ್" ಹೇಳಿ ನಿನ್ನ ಹೆಸರು ಕೇಳಬೇಕು ಅಂಥಾ ಅಂದುಕೊಳ್ಳುತೆನೆ ಆದರೆ ದೈಯಾ೯ನೆ ಬರಲ್ಲಾ ಕಣೆ, ಅದೇನು ಜಾದುನೊ ನಿಂದು, ನುರಾರು ವಿದ್ಯಾಥಿಗಳ ಎದುರಿಗೆ ಘಂಟೆ ಘಂಟಲೆ ಚಚಾ೯ ಸ್ಪದೆ೯ಗಳಲ್ಲಿ ಯಾವುದೆ ಅಳುಕಿಲ್ಲದೆ ಮಾತನಾಡುತಿದ್ದ ನಾನು ಇಂದು ಒಂದು ಹುಡಗಿಗೆ "ಹಾಯ್" ಹೇಳೊಕೆ ಹೆದರುತಿದ್ದೆನೆ ಅಂತಾ ಏನದ್ರು ನನ್ನ ಬಾಲ್ಯ ಸ್ನೆಹಿತರಿಗೆ ಗೋತ್ತಾದರೆ ನನ್ನ ಕಥೆ ಅಷ್ಟೆ...
       ಪ್ರತಿ ಸಾರಿಯು ನೀನು ನನ್ನ ಹತ್ತಿರ ಬಂದಾಗ ನನ್ನ "Heart" 100+ ವೇಗದಲ್ಲಿ ಬಡಿದುಕೊಳುತ್ತದೆ, ನೀನು ನನ್ನ ಹತ್ತಿರ ಬರುತ್ತಿಯಾ, ನನಗೆ Smile ಕೊಡುತಿಯಾ ಅಂದುಕೊಳ್ಳುತ್ತೆನೆ ಆದರೆ ನಿನು ನನ್ನ ಯಾವ ಊರ ದಾಸ್ಸಯ್ಯಾ ಅಂಥಾ ಕೊಡ ನೋಡಲ್ಲ...
      ಹೇ ನಿನಗೆ ಹೊಲಿಸಿದರೆ ನಾನೇ ನಿನಗಿಂತ ಏಷ್ಟೊ fair ಮತ್ತು smart ಆಗಿದ್ದೆನೆ ಗೊತ್ತಾ ಆದ್ರೊ ಏನೆ ನಿಂದು ತಕರಾರು plz ಒಂದು ಸಲ ಮಾತನಡಿಸು
   ಒಂಟೆ ತರಹ Height ಇದ್ದಿಯಾ, ಆನೆ ತರಹ ದಪ್ಪ ಇದ್ದಿಯಾ, ಬಿಪಾಷ ಬಸು ಬಣ್ಣ ಇದ್ದಿಯಾ ಆದ್ರು ನೀನು ನನಗೆ ಇಷ್ಟಾ ಕಣೆ, ನಾನು-ನೀನು ರಸ್ತೆಯಲ್ಲಿ ಜೂತೆಯಾಗಿ ಹೋಗ್ತಾ ಇದ್ರೆ ಜನರು ನಮ್ಮನ್ನು ನೋಡಿ "ನೋಡು ಮಗಾ ಆನೆ-ಒಂಟೆ ಜೋತೆಗೆ ಹೋಗ್ತಾ ಇವೆ" ಅನ್ನುತ್ತಾರೆನೊ ಆದ್ರು ನನಗೆ ಬೆಜಾರಿಲ್ಲ ಏಕೆಂದ್ರೆ ನಿನೆಂದ್ರೆ ನನಗೆ ತುಂಬಾ ಇಷ್ಟಾ ಕಣೇ.
      ನೀನು ಏಷ್ಟೇ ದಪ್ಪಾ ಆಗು, ಏಷ್ಟೇ ಕಪ್ಪಾಗು ಆವಗಲು ಕೊಡಾ ನಿನ್ನ ಇಷ್ಟೇ ಇಸ್ಟಾಪಡ್ತಿನಿ plz ಒಪ್ಪ್ಕೊಳೆ...
      ಈ ಸಲ ನೀನೆ ನನಗೆ ಹಾಯ್ ಹೆಳ್ತೆಯಲ್ಲಾ?
       ನಿನಗೊಸ್ಕರ ಕಾಯುತ್ತಿರುವ
            ಯಾವಾಗಲು ನಿನ್ನವ.................................
                                                                                                   ಪ್ರಶು

ಒಂದು ಊರಿನ ಕಥೆ

ನನಗೆ ನನ್ನ ಸ್ನೇಹಿತರು ಅತಿ ಹೆಚ್ಚು ಕೇಳಿರಿವ ಪ್ರಶ್ನೆ ಅಂದರೆ, ನಿಮ್ಮ ಊರಿಗೆ ರಾಣೇಬೆನ್ನೂರು ಎಂದು ಹೆಸರು ಹೇಗೆ ಬಂತು? ಎಂದು, ಅದಕ್ಕೆ ಒಂದು ಭವ್ಯವಾದ ಐತಿಹಾಸಿಕ ಕಥೆ...