Sunday, October 21, 2012

ನಮ್ಮ ಏರಿಯಾ ಸ್ವಾಮಿನಾಥನ್ ಶೆಟ್ಟಿ

ನಮ್ಮ ಏರಿಯಾ ಸ್ವಾಮಿನಾಥನ್ ಶೆಟ್ಟಿ
ಬಲು ಗಟ್ಟಿ ಯಾಕಂದ್ರೆ ಅವರು ಜಟ್ಟಿ
ಅವರ ಮಗಳು ಬಲು ಬ್ಯೂಟಿ
ಎಷ್ಟೆ ಆದರು ಮಲಿಯಾಳಿ ಕುಟ್ಟಿ

Saturday, October 20, 2012

ನಿದ್ರೆ

ರಾತ್ರಿ ಹನ್ನೆರೆಡಾದರು ಬಾರದ ನಿದ್ರೆ
ನೂರರಿಂದ ಸೊನ್ನೆತನಕ ಎಣಿಸಿದರು ಸುಳಿಯದ ನಿದ್ರೆ
ಬೇಸರದಿ ಮನೆಯಿಂದ ಆಚೆ ನೆಡದರೆ
ದೂರದೆಲೆಲ್ಲೊ ನಾಯಿಯೊಂದರ ಓಳಿಡುವಿಕೆ
ಅಗೊಮ್ಮೆ ಇಗೊಮ್ಮೆ ಸಣ್ಣಗೆ ಸುರಿಯುವ ಮಳೆ
ಹುಡುಗನೊಬ್ಬ ಪ್ರಿಯಸಿಯೊಂದಿಗೆ ಪೋನಿನಲ್ಲಿ ಪಿಸುಗುಡುವಾ ದ್ರುಶ್ಯ
ನನ್ನಂತೆ ನಿದ್ರೆ ಬರದ ಹುಡುಗನೊಬ್ಬ
ಆಚೆ ಬದಿಯಲ್ಲಿ ನಿಂತು ಸಿಗರೇಟ ಹೊಗೆ ಹೊಮ್ಮಿಸುತ್ತಿರುವ ಬಗೆ
ಆಚೆ ಮನೆಯಲ್ಲಿ ಮೆಲ್ಲಗೆ ಕೇಳುವ ಟಿವಿ ಸದ್ದು
ಇಚೆ ಮನೆಯಲ್ಲಿ ಕಿಲಕಿಲ ನಗುವ ಸದ್ದು
ಇನ್ನೊಂದು ಮನೆಯ ಬಾಗಿಲ ಹಿಂದೆ  ಏನು ನೆಡೆಯುತಿಹುದೊ ನಾ ಅರಿಯೆ
ರಾತ್ರಿ ಪಾಳೆಯ ಕೆಲಸದಲ್ಲಿ ಮಗ್ನವಾಗಿರುವ ಜನ
ನೈಟು ಡ್ಯೊಟಿಯ ಪೋಲಿಸರ ಸಿಳ್ಳೆ
ನಿಜ೯ನ ರಸ್ತೆಯಲ್ಲಿ ಆಗೊಮ್ಮೆ-ಇಗೊಮ್ಮ ಇಣುಕುವ ವಾಹನಗಳು
ಕತ್ತಲಿನೊಡನೆ ಕುಸ್ತಿಯಲ್ಲಿ ನಿರತವಾದ ಬೀದಿ ದೀಪಗಳು
ಅರವತ್ತರ ಇಳಿವಯಸ್ಸಿನಲ್ಲು ಮಧ್ಯರಾತ್ರಿ ಚಹಾ-ಕಾಪಿ ಗಿರಾಕಿಗಳ
ಎದುರು ನೋಡುತ್ತಾ ಮುದುರಿ ಕುಳಿತ ತಾತ
ಅದೆಲ್ಲೊ ಇನ್ನಾವುದೊ ವ್ಯಾಪಾರದಲ್ಲಿ ಅದ್ಯಾರೊ ಮಗ್ನರು
ಬಹುಷ್ಯ ಇವರೆಲ್ಲೆರಿಗು ನನ್ನಂತೆಯೆ ನಿದ್ರೆ ಬಾರದ ರೋಗ
ಮನಗೆ ಮರಳಿ ಹಾಸಿಗೆಯಲ್ಲಿ ಊರಳಿದರು ಇನ್ನು ಸುಳಿಯದ ನಿದ್ರೆ
ಆದರೆ ಅದಾಗಲೆ ಕಿಟಕಿಯಾಚಿಯಲ್ಲಿ ಆರಂಭವಾಗಿತ್ತು ಪಕ್ಷಿಗಳ ಚಿಲಿಪಿಲಿ

Sunday, October 14, 2012

ಜೀವನವೆಂದರೆ....

                   ಅವನು ನಾನು ಓದಿದ ಕಲೇಜಿನಲ್ಲೆ ಓದಿದವನು ನನ್ನ ಸಿನಿಯರ್, ನನ್ನ ಪಕ್ಕದ ಊರಿನವನು, ತಂದೆ ತಾಯಿಗಳ ಒಬ್ಬನೆ ಮಗ, ದೂರದ ನಗರದಲ್ಲಿ ಒಳ್ಳೆಯ ಕೆಲಸದಲ್ಲಿ ಇದ್ದ,  ಕೆಲವು ವಷ೯ಗಳ ಹಿಂದೆ ಅವನ ತಂದೆ ತಾಯಿಗಳು ತಮ್ಮ ಸಂಬಧಿಕರಲ್ಲೆ ಒಂದು ಹುಡಗಿಯನ್ನು ತಮ್ಮ ಸೊಸೆಯಾಗಿ ಮನೆ ತುಂಬಿಸಿಕೊಂಡರು,  ಮಗನಿಗು ಅಪ್ಪ-ಅಮ್ಮ ಅಂದರೆ ತುಂಭಾ ಪ್ರೀತಿ ಹಿಗಾಗಿ ನಗರದಲ್ಲೆ ಒಂದು ಮನೆ ಮಾಡಿ ತಂದೆ ತಾಯಿಯನ್ನು ನಗರಕ್ಕೆ ಕರಸಿಕೊಂಡನು, ಗಂಡ-ಹೆಂಡತಿ, ಅಪ್ಪ-ಅಮ್ಮ ಸುಖಿ ಸಂಸಾರ, ಒಂದು ವಷ೯ದ ಬಳಿಕ ಒಂದು ಮುದ್ದಾದ ಗಂಡು ಮಗು ಕೂಡ ಆಯಿತು ಸ್ವಗ೯ಕ್ಕೆ ಮೂರೆ ಗೇಣು ಅನ್ನುವಷ್ಟು ಸಂತಸ ತುಂಬಿತ್ತು ಅವರ ಮನೆಯಲ್ಲಿ, ಆದರೆ ಅದ್ಯಾರ ವಕ್ರ ದ್ರುಷ್ಟಿ ಅವರ ಕುಟುಂದ ಮೇಲೆ ಬಿದ್ದಿತೊ ನಾ ಕಾಣೆ, ಅನಾರೋಗ್ಯವೆಂದು ಆಸ್ಪತ್ರೆ ಸೇರಿದ ಅವನ ತಂದೆ ಮನೆಗೆ ಮರಳಲೆ ಇಲ್ಲ, ಇನ್ನು ಆ ಚಿಕ್ಕ ಮಗುವಿನ ಆರೋಗ್ಯ ಕೂಡ ಪದೆ ಪದೆ ಹದಗೆಡುತಿತ್ತು, ಅದೂಂದು ದಿನ ತಿವ್ರ ತಪಾಸಣೆ ನೆಡಸಿದ ವೈದ್ಯರು ಮಗುವಿನ ಒಂದು ಕಿಡ್ನಿ  ವಿಪಲವಾಗಿರುವುದನ್ನು ಪತ್ತೆ ಮಾಡಿದರು, ಮೊದಲೆ ತಂದೆ ಕಳೆದುಕೊಂಡು ಆಘಾತ ಅನುಭವಿಸದ ಅವರಿಗೆ ದೇವರು ಮೊತ್ತೊಂದು ಆಘಾತ ನೀಡಿದ್ದ, ಈ ಮದ್ಯೆ ಅವನು ನಗರದಲ್ಲಿ ಇರುವ ತನ್ನ ಮನೆಗೆ ಮರಳಿದಾಗ ಅವನಿಗೆ ಇನ್ನೊಂದು ಆಘಾತ ಕಾದಿತ್ತು, ಅವನ ಮನೆಗೆ ಕಳ್ಳರು ಕನ್ನಹಾಕಿದ್ದರು, ಅಳೀದುಳಿದ ಸ್ವಲ್ಪ ಹಣ, ಬಂಗಾರ ಎಲ್ಲವನ್ನು ದೊಚ್ಚಿದ್ದರು, ಪಾಪ ಆಘಾತಗಳ ಮೇಲೆ ಆಘಾತ ಅನುಭವಿಸಿದ ಅವನ ಸ್ಥಿತಿ ಹೇಗಿರ ಬೇಡ, ದೇವರು ಕೊಟ್ಟರೆ ಬರಿ ಸಂತೋಷಗಳನ್ನೆ ಕೊಡುತ್ತಾನೆ, ಇಲ್ಲವಾದರೆ ಬರಿ ಕಷ್ಟಗಳ ಸರಮಾಲೆ, ಜೀವನವೆಂದರೆ ಇದೆನಾ? 

Saturday, October 13, 2012

ಅವಳು

           
            ಅವಳ ನಯನ
            ಕಾಮನಬಿಲ್ಲ ಹೊಂಗಿರಣ
            ಅವಳ ನಾಚಿಕೆ
            ಮುಟ್ಟಿದರೆ ಮುನಿಯಂತೆ
            ಅವಳ ನೆನಪು
           ಹೋಳಿಗೆಯಷ್ಟು ಸವಿ
           ಅವಳ ನೋಡಲು
           ನನ್ನ ಮನದಿ ತಲ್ಲಣ
            ಅವಳ ನೆಡತೆ
           ಜನಕರಾಜನ ಮಗಳಂತೆ
           ಅವಳ ನೃತ್ಯನ
            ನವಿಲು ನಾಚುವಂತೆ
           ಅವಳ ನಗುವು
           ಮುಂಗಾರಿಗೆ ಮುನ್ನಡಿಯಂತೆ
           ಅವಳ ನಾಸಿಕ
           ನೋಡಲು ಬಲು ಚಂದ
           ಅವಳೂರು ನಾಸಿಕ್
           ಇಲ್ಲಿಂದ ಬಲು ದೂರ
           ಅವಳು ನನಗೆ
           ಗಗನದಾ ಕುಸುಮ

ಒಂದು ಊರಿನ ಕಥೆ

ನನಗೆ ನನ್ನ ಸ್ನೇಹಿತರು ಅತಿ ಹೆಚ್ಚು ಕೇಳಿರಿವ ಪ್ರಶ್ನೆ ಅಂದರೆ, ನಿಮ್ಮ ಊರಿಗೆ ರಾಣೇಬೆನ್ನೂರು ಎಂದು ಹೆಸರು ಹೇಗೆ ಬಂತು? ಎಂದು, ಅದಕ್ಕೆ ಒಂದು ಭವ್ಯವಾದ ಐತಿಹಾಸಿಕ ಕಥೆ...