Thursday, September 13, 2012

ನನ್ನ ದಿನಚರಿಯ ಪುಟದಿಂದ...

          ಮೂರು ವಷ೯ದಿಂದ ಒಮ್ಮೆಯು ಸ್ವಚಮಾಡದ ರೂಮ್ ನ್ನು ಗೆಳಯನ ಹುಟ್ಟುಹಬ್ಬಕ್ಕಾಗಿ ಸ್ವಚಮಾಡಿ, ಬಲುನುಗಳಿಂದ ಸಿಂಗರಿಸಿ, ಬಣ್ಣ-ಬಣ್ಣದ ಅಕ್ಷರಗಳಲ್ಲಿ ಹೆಸರು ಬರೆದು ಹಬ್ಬದಂತೆ ಆಚರಿಸಿದ ಆದಿನ.... ರಾತ್ರಿ ೧೧ರ ಸಮಯದಲ್ಲಿ ಸುರಿಯುವ ಮಳೆಯಲ್ಲಿ ನೆನೆಯುತ್ತಾ ಕೇಕ್ ತಂದ ಇನ್ನೊಂದು ದಿನ.... ದೂರದಲ್ಲೆಲ್ಲೂ ಇದ್ದ ಗೆಳಯನನ್ನು ಮದ್ಯರಾತ್ರಿ ಹೋಗಿ ಕರೆದು ಕೊಂಡು ಬಂದು ಹುಟ್ಟುಹಬ್ಬ ಆಚರಿಸಿದ ಮತ್ತೊಂದು ದಿನ... ರಾತ್ರಿ ೧೦ಕ್ಕೆ ಮಲಗುವ ಅಭ್ಯಾಸವಿದ್ದರು ರಾತ್ರಿ ೧೨ಕ್ಕೆ ವಿಶ್ ಮಾಡಬೇಕೆಂದು ಅಲಾರಾಂ ಇಟ್ಟುಕೊಂಡು ಮಲಗಿ ೧೨ಕ್ಕೆ ಎದ್ದು ಮೊದಲಿಗರಾಗಿ ವಿಶ್ ಮಾಡಿದ ಆ ಘಳಿಗೆ... ಹಿಗೆಯೆ ನನ್ನ ಆತ್ಮಿಯ ಗೆಳೆಯರ ಹುಟ್ಟುಹಬ್ಬಗಳ ಸಂಬ್ರಮದ ಆಚರಣೆಗಳನ್ನು ನೆನೆಯುತ್ತಾ ಹೊದರೆ ಎಷ್ಟೊಂದು ಸಂತಸವಲ್ಲವೆ..
           ಆದರೆ ಇದೆ ಆತ್ಮಿಯ ಗೆಳಯರು ನಮ್ಮ ಹುಟ್ಟು ಹಬ್ಬದ ದಿನ ಕನಿಷ್ಠಪಕ್ಷ ಒಂದು ವಿಶ್ ಮಾಡದಿದ್ದರೆ ಹೇಗಾಗಬೇಡ? ಖಂಡಿತಾ ಅದು ತುಂಭಾ ನೋವು ನಿಡುವ ಘಳಿಗೆ, ಅದರ ಅನುಭವ ಇತಿಚೆಗೆ ನನಗು ಮತ್ತು ನನ್ನ ಮಿತ್ರನಿಗು ಆದಗ ತುಂಭಾ ಬೇಸರವೆನಿಸಿತು. ಅಷ್ಟೊಂದು ಆತ್ಮಿಯರೆನಿಕೊಂಡವರಿಂದ ಒಂದು ಶುಭ ಸಂದೇಶ ನೀರಿಕ್ಷಿಸುವುದು ತಪ್ಪೆ?(ಕೊನೆಪಕ್ಷ ಒಂದು ಎಸ್.ಎಮ್.ಎಸ್). ಅದ್ಯಾರೂ ಗೊತ್ತಿಲ್ಲದ ಗೆಳಯನೊಬ್ಬ ಫ಼ೆಸ್ ಬುಕ್ ನಲ್ಲಿ ಮಾಡಿದ ವಿಶ್ ನೋಡಿ ನಿಮ್ಮ ಹಲವು ವಷ೯ಗಳ (ಆತ್ಮಿಯ)ಗೆಳಯ "ನಿನ್ನ ಬತ್೯ಡೆ ಮೂಗಿದು ಹೊಯಿತೆ ನನಗೆ ಹೆಳಲೆ ಇಲ್ಲವಲ್ಲಾ" ಎಂದಾಗ ನಿಮಗೆ ಏನು ಅನಿಸಬಹುದು? ನೀರಿಕ್ಷೆಗಳಿಂದ ನೋವು ಅನ್ನುತ್ತಾರೆ, ಆದರೆ ಸಾಮಾನ್ಯರಲ್ಲಿ ಸಾಮಾನ್ಯರಾದ ನಾವು ಆತ್ಮಿಯರಿಂದ ಮುಗುಳುನಗೆಯ ಒಂದು ಮಾತು ನೀರಿಕ್ಷಿಸುವುದು ತಪ್ಪೆ? ಬಹುಷ್ಯ ತಪ್ಪು ನಮ್ಮದೆ ಅನಿಸುತ್ತದೆ, ಏಕೆಂದರೆ ನಮಗೆ ಮಾತ್ರ ಅವರು ಆತ್ಮಿಯರು ಆದರೆ ಅವರಿಗೆ ನಾವು.....................  ಅನಿಸುತ್ತದೆ.
        ಅದೆಷ್ಟೂ ಅನಾಥ ಮಕ್ಕಳಿಗೆ ತಮ್ಮ ಜನ್ಮದಿನವೆಂದು ಏಂಬುದೆ ತಿಳಿದಿರುಹುದಿಲ್ಲ, ಇನ್ನು ಅವರಿಗೆ ಹುಟ್ಟುಹಬ್ಬದ ಸಂಭ್ರಮವೆಲ್ಲಿ?, ನಮ್ಮ ಜನ್ಮದಿನದಂದು ಅನಾಥ ಮಕ್ಕಳಿಗೆ ಸಿಹಿ ಹಂಚಿ ಅವರೊಡೂನೆ ಅಲ್ಪ ಸಮಯ ಕಳೆದರೆ ಅವರಿಗು ಅಲ್ಪ ಸಂತಸ ನಿಡಿದ ಪುಣ್ಯವಾದರು ಬರುತ್ತದೆ, ಮನಸಿಗು ನಿಮ್ಮದಿ ಸಿಗುತ್ತದೆ ಇದು ಈ ಸಾರಿ ನಾನು ಮತ್ತು ನನ್ನ ಗೆಳಯ ಕಂಡುಕೊಂಡ ಸತ್ಯ. ಅತ್ಮಿಯತೆ ಎಂಬ ಮುಖವಾಡ ದರಿಸಿ ನಮ್ಮೊಡನೆ ಇರುವ ಗೆಳಯರಿಗಿಂತ ಅನಾಥ ಮಕ್ಕಳ ನಿಶಕಲ್ಮಷ ಮನಸೆ ಹೆಚ್ಹು ಮದನಿಡುತ್ತದೆ.
  ಗೆಳಯನೊಬ್ಬನ ಒತ್ತಾಯದ ಮೆರೆಗೆ ನನ್ನ ದಿನಚರಿಯಲ್ಲಿ ಅಡಗಿದ್ದ ನನ್ನ ಈ ಭಾವನೆಗಳನ್ನು  ಇಲ್ಲಿ ಬರೆದಿದ್ದೆನೆ ಯಾರಿಗಾದರು ಬೇಸರವಾಗಿದ್ದರೆ ಅಥವಾ ನೋವು ಆಗಿದ್ದರೆ ಅದಕ್ಕೆ ನಾನು ಹೊಣೆಯಲ್ಲ. 

Saturday, September 1, 2012

ಮಂಗಳಾರತಿ

ಗುರುವಾರದಂದು ಗುರುರಾಯರ ದಶ೯ನಕೆ
ತೆರಳಿದ್ದೆ ನಾ ಮಂದಿರಕ್ಕೆ
ಗುರುರಾಯರ ಎದರು ಕಂಡೆ ನಾ
ಕಪ್ಪು ಸಿರೆಯಲಿ ಹಾಲು ಬಣ್ಣದಾ ಚಲುವೆ.

ಜೋಡಿಸಿದ್ದ ಕೈ, ಮುಚ್ಹಿದ್ದ ಕಣ್ಣು
ತುಟಿಯಲ್ಲಿ ರಾಯರ ಸ್ಮರಣೆ
ನೋಡುತ ಅವಳ ನಾನು
ಮರತೆ ಆ ಕ್ಷಣ ಗುರುರಾಯರನ್ನೆ.

ಕಣ್ಣ್ ತೆರೆದು ರಾಯರಿಗೆ ವಂದಿಸಿ
ನೋಡಿದಳು ನನ್ನಡೆಗೆ ಒಂದು ಕ್ಷಣ
ಚಲ್ಲಿ ಹೂ ನಗೆ ನನ್ನಡೆಗೆ ಒಂದು ಬಾರಿ
ಹೊರಟು ಹೋದಳು ಮುಂದೆ ತಿರುಗಿ ನೋಡದೆ.

ಮನ ಅವಳ ಹಿಂದೆ, ದೇಹ ರಾಯರ ಮುಂದೆ
ನಾ ಎತ್ತ ಹೋಗಲಿ ತಿಳಿಯದಾಗಿತ್ತು
ಸುಟ್ಟಾಗಲೆ ಕೈ ಅರಿವಾಗಿತ್ತು ನನಗೆ
ನಿಂತಿದ್ದ ಅಚ೯ಕ ಎದುರು ಮಂಗಳಾರತಿಯೊಂದಿಗೆ.

ಒಂದು ಊರಿನ ಕಥೆ

ನನಗೆ ನನ್ನ ಸ್ನೇಹಿತರು ಅತಿ ಹೆಚ್ಚು ಕೇಳಿರಿವ ಪ್ರಶ್ನೆ ಅಂದರೆ, ನಿಮ್ಮ ಊರಿಗೆ ರಾಣೇಬೆನ್ನೂರು ಎಂದು ಹೆಸರು ಹೇಗೆ ಬಂತು? ಎಂದು, ಅದಕ್ಕೆ ಒಂದು ಭವ್ಯವಾದ ಐತಿಹಾಸಿಕ ಕಥೆ...