Wednesday, July 18, 2018

'ಆದಿ'ಯ ಅಂತ್ಯವಿಲ್ಲದ ಕಥೆ

ಹುಳು ಹುಟ್ಟಿ ಸಾಯುತಿರೆ ನೆಲ ಸವೆದು ಕರಗುತಿರೆ ।
ಕಡಲೊಳೆತ್ತಲೋ ಹೊಸ ದ್ವೀಪವೇಳುವುದು ।।
ಕಳೆಯುತೊಂದಿರಲಿಲ್ಲಿ ಬೆಳೆವುದಿನ್ನೊಂದೆಲ್ಲೊ ।
ಅಳಿವಿಲ್ಲ ವಿಶ್ವಕ್ಕೆ ಮಂಕುತಿಮ್ಮ ।।

ಎಷ್ಟು ಅರ್ಥ ಪೂರ್ಣವಾಗಿದೆಯಲ್ಲ ಡಿವಿಜಿ ಯವರ ಈ ಕವನ ಪ್ರಶಾಂತ್, ಎಲ್ಲೋ ಒಂದು ಕಡೆ ಜೀವಿ ಸಾಯುತಿರೇ ಇನ್ನೆಲ್ಲೂ ಒಂದು ಜೀವಿ ಹುಟ್ಟುತಿರುತ್ತೆ, ಎಲ್ಲೂ ಒಂದು ಕಡೆ ಭೂಮಿ ಸಮುದ್ರದ ಆಳದಲ್ಲಿ ಮುಳಿಗಿದ್ರೆ ಇನ್ನೆಲ್ಲೋ ಒಂದು ಕಡೆ ಸಮುದ್ರದಿಂದ ನೆಲ ಆಚೆ ಬಂದಿರುತ್ತೆ, ನನ್ನ ಜೀವನದಲ್ಲೂ ಅಷ್ಟೇ ಒಂದು ಕಷ್ಟ ಮುಗಿತು ಅಂತ ನಿಟ್ಟುಸಿರು  ಬಿಡ್ತಾ ಇದ್ದಹಾಗೆ ಇನ್ನೊಂದು ಕಷ್ಟ ಎದುರು ನಿಂತಿರುತ್ತೇ.... ಆದಿ ಮಾತನಾಡುತ್ತಲೇ ಇದ್ದ ಕಾರ್ ನ ಎಫ್ ಎಮ ನಲ್ಲಿ ಮಹಮ್ಮದ್ ರಪಿಯ ಜಿನಾ ಎಹಾ ಮರನಾ ಎಹಾ, ಇಸಕೆ ಸಿವಾ ಜಾನಾ ಕಹಾ ಹಾಡು ಬರುತಿತ್ತು. ನಮ್ಮ ಕಾರ್ 40ರ ವೇಗದಲ್ಲಿ ಕೋಲಾರ ಕಡೆ ನಿಧಾನವಾಗಿ ಸಾಗಿತ್ತು, ಯಾಕೋ ಅಂದು ಆದಿ ಮಾತನಾಡುವ ಮೂಡ್ ನಲ್ಲಿ ಇದ್ದ.

ನೀನು ಯಾವಾಗಲೂ ಕೇಳ್ತಾ ಇದ್ದೆ  ನಾನು ಚೆನೈ ಬಿಟ್ಟು ಬೆಂಗಳೂರಿಗೆ ಯಾಕ್ ಬಂದೆ ಅಂತಾ, ನನಗೂ ಚೆನೈ ಬಿಡೋಕೆ ಇಷ್ಟಾ ಇರಲಿಲ್ಲ, ಎಷ್ಟೇ ಆದ್ರೂ ಅದು ನನ್ನ ಊರು ಅಲ್ವಾ ಬಟ್ ಅಲ್ಲಿ ಇರೋದು ತುಂಬಾ ಕಷ್ಟ ಆಗಿತ್ತು ನನಗೆ ಅಂದವ ಸುಮ್ಮನಾದ ಆದಿ.

ಯಾಕೆ ಅಂತ ಕೇಳಬೇಕು ಅನಿಸ್ತು ಆದರೆ ನಾನು ಮಾತಾಡಿದ್ರೆ ಅವನು ಮತ್ತೆ ಎಲ್ಲಿ ಮೌನಿ ಆಗ್ತನೋ ಅಂತಾ ಸುಮ್ಮನಿದ್ದೆ
ಕೆಲವು ಕ್ಷಣಗಳ ಬಳಿಕ ಮತ್ತೆ

ಆಗತಾನೆ ಎರಡನೇ ಅಣ್ಣನಿಗೆ ಮದುವೆ ಆಗಿತ್ತು, ಮನೆಗೆ ಅತ್ತಿಗೆ ಬಂದಿದ್ರು ತುಂಬಾ ಖುಷಿಯಾಗಿದ್ದೆ ಅತ್ತಿಗೆ ಅಂದ್ರೆ ತಾಯಿ ಇದ್ದ ಹಾಗೆ ತಾಯಿ ಅಷ್ಟು ಅಕ್ಕರೆ ಪ್ರೀತಿ ಸಿಗದೆ ಇದ್ದರು ಅದರ ಅರ್ಧ ಪ್ರೀತಿ ವಾತ್ಸಲ್ಯ ಸಿಕ್ಕರೆ ಸಾಕು ಅಂದು ಕೊಂಡಿದ್ದೆ ಆದರೆ ಕೆಲವೇ ದಿನಗಳಲ್ಲಿ ನನ್ನ ಆಸೆಗಳೆಲ್ಲ ನುಚ್ಚು ನೂರಾಗಿದ್ದವು, ಅತ್ತಿಗೆ ಯಾವತ್ತೂ ನನ್ನ ಜೊತೆ ಮಾತೆ ಆಡಲಿಲ್ಲ ನಾನಾಗೆ ಮಾತನಾಡಿಸಿದರೆ ಹಾ ಹೂ ನಲ್ಲೇ ಉತ್ತರ, ಅದಕ್ಕೆ ಅಣ್ಣನ ಸಾತ್ ಬೇರೆ ಅದುವರಿಗೂ ನಗುನಗುತ್ತಾ ಮಾತನಾಡುತ್ತಿದ್ದ ಅಣ್ಣನು ಅತ್ತಿಗೆಯನ್ನೇ ಹಿಂಬಾಲಿಸಿದ, ಪ್ರಶಾಂತ್ ಈ ಮೌನ ಎನ್ನುವುದು ಯಾವ ಮನುಷ್ಯನಾದರು ಅಭದ್ರನನ್ನಾಗಿ ಮಾಡುತ್ತದೆ ಅತೀವ ಹಿಂಸೆ ಕೊಡುತ್ತದೆ, ಅವರು ನನ್ನ ಜೊತೆ ಜಗಳ ಮಾಡಿದ್ದರೆ ಅಥವಾ ನನಗೆ ಬೈಯುತ್ತಾ ಇದಿದ್ದರೆ ಇಷ್ಟು ನೋವು ಆಗ್ತಾ ಇರಲಿಲ್ಲ ಆದರೆ ನನ್ನ ಜೊತೆಗೆ ಮತನಾಡುವುದನ್ನೇ ನಿಲ್ಲಿಸಿಬಿಟ್ಟಿದ್ದರು ಅದು ಕಾರಣವಿಲ್ಲದೆ. ಅಂದೆ ನಿರ್ಧರಿಸಿದ್ದೆ ಇನ್ನು ಈ ಮನೆಯಲ್ಲಿ ಇರಬಾರದು, ಬೇರೆ ಮನೆ ಮಾಡುತ್ತೇನೆ ಎಂದರೆ ದೂರದಲ್ಲಿರುವ ಅಪ್ಪ ಅಮ್ಮ ರಂಪ ಮಾಡುತ್ತಾರೆ, ಸುಮ್ಮನೆ ಯಾಕೆ ರಗಳೆ ಎಂದು ಚೆನೈ ಬಿಡುವ ನಿರ್ಧಾರ ಮಾಡಿದ್ದೆ.


ಕಾರಿನ ಮ್ಯೂಸಿಕ್ ಸಿಸ್ಟಮ್ ನಿಂದ ಸಣ್ಣಗೆ ಕೇಳಿ ಬರುತ್ತಿದ್ದ ಎಫ್ ಎಮ್ ನಲ್ಲಿ
"ಈಗ ಕೇಳಿ ಅಣ್ಣ ತಂಗಿ ಚಿತ್ರದ ಅಣ್ಣ ನಮ್ಮವನಾದರು ಅತ್ತೆಗೆ ನಮ್ಮವಳಾ ಹಾಡು ಬರುತ್ತಿರುವ ರಕ್ಷಾಬಂಧನ ಹಬ್ಬದ ವಿಶೇಷವಾಗಿ ನಿಮ್ಮ 92.7 ಬಿಗ್ ಎಫ್ ಎಮ್ ನಲ್ಲಿ ನಾನು ನಿಮ್ಮ Rapid Rashmi" 

ನಮ್ಮ ಕಾರ ಆಗಲೇ ಕೋಲಾರದ ಸಮೀಪದಲ್ಲಿತ್ತು

ಆದಿ ಟೀ?

ಬೇಡ ಪ್ರಶಾಂತ್ ಕೋಲಾರ ದಾಟಿದ ಮೇಲೆ ಕುಡಿಯೋಣ ಅಂದ ಆದಿ,
ಮತ್ತದೇ ಮೌನ.

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೇ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ

ಅವತ್ತು ತುಂಬಾ ಖುಷಿಯಾಗಿದ್ದೆ ಅಪ್ಪ ನನಗೆ ಹುಡುಗಿ ನೋಡಿದ್ದರು ಇನ್ಪ್ಯಾಕ್ಟ್ ನಾನು ಹೋಗಿದ್ದೆ, ಆ ಹುಡುಗಿ ಜೊತೆಗೆ ಮಾತಾಡಿದ್ದೆ ತುಂಬಾ ಮುದ್ದಾದ ಹುಡುಗೆ ನಂಗೆ ತುಂಬಾ ಇಷ್ಟಾ ಆಗಿದ್ದಳು, ಮನೆಗೆ ಬಂದ ಅಪ್ಪ ಇನ್ನೂ ಮೂರು ತಿಂಗಳಲ್ಲಿ ಅವಳಿಗೂ ನಿನಗೂ ಮದುವೆ ಅಂದಿದ್ರು, ಆಗ ಬೆಂಗಳೂರಿಗೆ ಬಂದು ಜಸ್ಟ್ 5 ತಿಂಗಳು ಆಗಿತ್ತು,
ಇನ್ನೆನ್ನೋ ಎಲ್ಲ ಕಷ್ಟಗಳು ಮುಗಿದವು ಅಂತ ಹಾಯಾಗಿದ್ದೆ,
ಆವತ್ತು ಶನಿವಾರ ಪ್ರಶಾಂತ್ ನನಗೆ ಚನ್ನಾಗಿ ನೆನಪಿದೆ ಅವತ್ತು ಲ್ಯಾಪ್ಟಾಪ್ನಲ್ಲಿ seethamma vakitlo sirimalle chettu ಮೂವಿ ನೋಡ್ತಾ ಇದ್ದೆ ಅದು ನನ್ನ ನೆಚ್ಚಿನ ಚಿತ್ರ ಅದರಲ್ಲಿ ಬರು ಪ್ರತಿ ಪಾತ್ರವೂ ನನಗೆ ಎಷ್ಟು ಇಷ್ಟಾ ಅಂದ್ರೆ ಆ ಚಿತ್ರನಾ ನಾನು ಎಷ್ಟು ಸಲಾ ನೋಡಿದ್ದೇನೋ ನನಗೆ ಗೊತ್ತಿಲ್ಲ, ಅವತ್ತು ನೋಡ್ತಾ ಇದ್ದೆ ಆಗ ಅಪ್ಪ ಪೋನ್ ಮಾಡಿದ್ದರು, ಆದಿ ನಿನ್ನ ಅಕೌಂಟ್ ನಲ್ಲಿ ಎಷ್ಟು ದುಡ್ಡು ಇಟ್ಟಿದ್ದಿಯಾ ಎಲ್ಲಾ ನನ್ನ ಅಕೌಂಟ್ ಗೆ ಟ್ರಾನ್ಸಪರ್ ಮಾಡು ಅಂದಿದ್ದರು, ಯಾವತ್ತೂ ಕೇಳದ ಅಪ್ಪ ಅಂದು ದುಡ್ಡು ಕೇಳಿದ್ದು ನೋಡಿ ಅಚ್ಚರಿ ಆಗಿತ್ತು, ಮರು ಮಾತಾಡದೆ ಹು ಅಂದಿದ್ದೆ ಮತ್ತು ಕಳಿಸಿದ್ದೆ. ಅದಾಗಿ ಒಂದು ತಿಂಗಳು ಆಗಿತ್ತು ಊರಿಗೆ ಹೋಗಿದ್ದೆ ನನ್ನ ಮೊದಲನೆ ಅಣ್ಣ ಕೂಡ ಬಂದಿದ್ದ. ಆಗಲೇ ಗೊತ್ತಾಗಿದ್ದು ನನಗೆ ಮೊದಲ ಅಣ್ಣ ಬೆಂಗಳೂರಿನಲ್ಲಿ ಫ್ಲಾಟ್ ತೆಗೆದುಕೊಂದಿದ್ದು, ಅದಕ್ಕೆ ಅಪ್ಪ ಕೊಡ 30 ಲಕ್ಷ ಕೊಟ್ಟಿದ್ದರು, ಅದರಲ್ಲಿ ನನ್ನ ಸೇವಿಂಗ್ ಕೂಡ ಇತ್ತು.
ನನ್ನ ಮದುವೆ ವಿಚಾರ ತಿಳಿದ ನನ್ನ ಮೊದಲ ಅಣ್ಣ ಮತ್ತು ಅತ್ತಿಗೆ ಎಲ್ಲಿ ಅಪ್ಪ ತನ್ನ ಉಳಿತಾಯದ ಹಣವನ್ನೆಲ್ಲಾ ನನ್ನ ಮದುವೆಗೆ ಖರ್ಚು ಮಾಡಿಬಿಡುತ್ತಾರೆನು ಎಂದು ಮೊದಲೇ ಪ್ಲಾನ್ ಮಾಡಿ ಮನೆಗೆ ಬಂದು ಹಠಮಾಡಿ ಅಪ್ಪ ಅಮ್ಮನನ್ನು ಒಪ್ಪಿಸಿ ಪ್ಲಾಟ್ ಬುಕ್ ಮಾಡಿದ್ದರು, ಅಸಹಾಯಕ ಅಮ್ಮ ನೆನ್ನದರು ಕಣ್ಣೀರು ಹಾಕಿದ್ದಳ್ಳು ಅಪ್ಪ ಮಾತ್ರ ನೆಪ ಮತ್ರಕ್ಕೆ ಆ ಹುಡುಗಿ ಮರೆತು ಬಿಡು ಇನ್ನೊಂದು ವರ್ಷ ಬಿಟ್ಟು ಅವಳಿಗಿಂತ ಚನ್ನಾಗಿರುವ ಹುಡುಗಿ ನೋಡುವ ಅಂದಿದ್ದರು, ನೆಪ ಮಾತ್ರಕ್ಕೂ ಯಾರು ನನ್ನ ಅಭಿಪ್ರಾಯ ಕೇಳಿರಲಿಲ್ಲ, ಪ್ರಶಾಂತ್ ಅಂದು ಜೀವನದಲ್ಲಿ ಎರಡನೇ ಸಲ ಸಂಭಂದಗಳನ್ನು ಅರ್ಥಮಾಡಿ ಕೊಳ್ಳುವುದರಲ್ಲಿ ನಾನು ಸೋತೆದ್ದೆ.

ಆದಿ ಮತ್ತೆ ಮೌನವಾಗಿದ್ದ ಆಗಲೇ ಕತ್ತಲು ಕವಿದಿತ್ತು, ಯಾಕೋ ಅವನ ಕಣ್ಣುಗಳಿಂದ ಕಣ್ಣೀರು ಉದುರುತ್ತಿರುವಂತೆ ಅನಿಸಿತು, ನನ್ನ ಕಣ್ಣುಗಳು ಮಂಜಗಿದ್ದವು,
ಆದಿ ಯಾಕೋ ಡ್ರೈವ್ ಮಾಡೋಕೆ ಆಗ್ತಾ ಇಲ್ಲ ಕಣೋ ಚೆನೈ ಇನ್ನು 220 km ಇದೆ ಅಷ್ಟು ದೂರ ನಂಗೆ ಡ್ರೈವ ಮಾಡೋ ಮೂಡ್ ಇಲ್ಲ ವಾಪ್ಪಸ್ ಬೆಂಗಳೂರು ಹೋಗುವ ಚೆನೈ ಟ್ರಿಪ್ ಮತ್ತೆ ಯಾವತ್ತಾದರೂ ಮಾಡೋಣ ಅಂದೆ.
ಅದಕ್ಕೆ ಆದಿಯು ತಲೆ ಆಡಿಸಿದ, ಮರು ಕ್ಷಣವೇ ಕಾರನ್ನು ಮರಳಿ ಬೆಂಗಳೂರಿನೆಡಗೆ ತಿರುಗಿಸಿದ್ದೆ.

ಬಾನೊಳಿರುವುದೆ ಪಕ್ಷಿ ಪಾರ್ವ ದಾರಿಯ ನಕ್ಷೆ ।
ಮೀನು ನೀರೊಳು ನುಸುಳೆ ಪಥನಿಯಮವಹುದೆ ।।
ಏನೊ ಜೀವವನೆಳೆವುದೇನೊ ನೂಕುವುದದನು ।
ನೀನೊಂದು ಗಾಳಿಪಟ ಮಂಕುತಿಮ್ಮ ।।

No comments:

Post a Comment

ಒಂದು ಊರಿನ ಕಥೆ

ನನಗೆ ನನ್ನ ಸ್ನೇಹಿತರು ಅತಿ ಹೆಚ್ಚು ಕೇಳಿರಿವ ಪ್ರಶ್ನೆ ಅಂದರೆ, ನಿಮ್ಮ ಊರಿಗೆ ರಾಣೇಬೆನ್ನೂರು ಎಂದು ಹೆಸರು ಹೇಗೆ ಬಂತು? ಎಂದು, ಅದಕ್ಕೆ ಒಂದು ಭವ್ಯವಾದ ಐತಿಹಾಸಿಕ ಕಥೆ...