Wednesday, July 1, 2015

ಅನಾಮಿಕ...

        ಶನಿವಾರ ಆಫೀಸಿಗೆ ರಜೆ, ವಾರದ ೫ ದಿನಾ ಬೆಳಗ್ಗೆ ಎಂದು ಆಫೀಸ್ ಗೆ ರೆಡಿಯಾಗಿ ಹೋಗುವದರಲ್ಲಿ ಕಳೆದು ಹೊಗುತ್ತೆ ಊಳಿದಿರುವ ಎರಡು ದಿನ ಆದರು ಆರೋಗ್ಯದ ಕಡೆ ಗಮನ ಇರಲಿ ಅಂತ ಬೆಳಗ್ಗೆ ಬೇಗ ಎದ್ದು ಸ್ವಲ್ಪ ದೂರ ಆದರು ಪರ್ವಾಗಿಲ್ಲ ಅಂತ ಲಾಲ್ ಬಾಗ್ ಗೆ ಕಳೆದ ಒಂದು ತಿಂಗಳಿಂದ ವಾಕ್ ಹೋಗ್ತಾ ಇದ್ದೆ, ಅವತ್ತು ಕೂಡ ವಾಕ್ ಮಾಡೊಕೆ ಅಂತಾ ಬಂದಿದ್ದೆ, ವಯಸ್ಸು ಆದವರು, ವಯಸ್ಸು ಆಗದೆ ಇರುವವರುಹುಡುಗರು,ಹುಡಿಗಿಯರು ಮತ್ತು ಅವರ ನಾಯಿಗಳು ಹೀಗೆ ನಾನಾ ತರದ ಜನ ತಮ್ಮ ಪಾಡಿಗೆ ತಾವು ನೆಡೆಯುತ್ತಾ, ನುಲಿಯುತ್ತಾ, ನಗುತ್ತಾ ಸಾಗಿದ್ದರು, ಲಾಲ್ ಬಾಗ್ ಅಂದ್ರೆ ಕೇಳಬೇಕಾ? ಬಣ್ಣ-ಬಣ್ಣದ ಚಿಟ್ಟಿಗಳು ಆ ಚೀಟ್ಟೆಗಳನ್ನು ನೋಡಲೆಂದೆ ಬರವ ಯುವಕರು..

 ಅವತ್ತು ಅಷ್ಟೆ ನನ್ನ ಮುಂದೆ ನಾಲ್ಕು ಬಣ್ಣ-ಬಣ್ಣದ ಚಿಟ್ಟೆಗಳು(ಹುಡಗಿಯರು) ಹೋಗ್ತಾ ಇದ್ದವು, ಪರಬಾಷೆ ಚಿಟ್ಟೆಗಳು, ಯಾರಾದರು ಒಬ್ಬರಾದರು ತಿರಿಗಿ ನೋಡಲಿ ಅಂತಾ
                   ರಾಜಾ ಕೊ ರಣಿ ಸೇ ಪ್ಯಾರ್ ಹೋಗಯಾ ,
                   ಪೇಹಲಿ ನಜರ ಮೈ ಪೇಹಲಾ...
 ಹಾಡುತ್ತಾ ಇದ್ದೆ ಹುಡಗಿರು ಯಾರು ತಿರಗಿ ನೋಡಲಿಲ್ಲ ಆದರ್ರೆ ದಾರಿ ಪಕ್ಕದ ಬೇಂಚಿನಲ್ಲಿ ಕುಳಿತಿದ್ದ ತಾತ ಒಬ್ರು ನನ್ನ ಹಾಡು ಕೇಳಿ ಬಾರೊ ಇಲ್ಲಿ ಅಂತಾ ಕರೆದರು, ಒಂದು ಕ್ಷಣ ನಿಂತು ಅವರ ಮುಖಾ ನೋಡಿದೆ, ಈ ಕಡೆಯಿಂದ ನೋಡ್ರಿದೆ ದೇವೆಗೌಡ್ರ ತರಾನೆ ಕಾಣ್ತಾರೆ ಅವರಿಗಿತ್ತ ಸ್ವಲ್ಪ ಕಲರ್ ಇದ್ದಾರೆ, ನನ್ನ ಏನಕ್ಕೆ ಕರದರು? ಬೈತಾರಾ? ಹೊಗಲಾ? ಬೇಡ್ವಾ?... ಬೈದ್ರೆ ಬೈಲಿ ನೋಡೊಣಾ ಅಂತಾ ಹತ್ತಿರ ಹೋದೆ, ಮುಂದೆ ಹೋಗ್ತಾ ಇದ್ದ ನಾಲ್ಕು ಹುಡಗಿಯರ ಕಡೆಗೆ ಕೈ ತೋರಿಸುತ್ತಾ ಅದರಲ್ಲಿ ಯಾವ ಹುಡಗಿಗಾಗಿ ಹಾಡಿದೆ ಹೇಳು ಅಂದರು.

ನಾನು ಯಾಕ್ ತಾತಾ ಅದರಲ್ಲಿ ಏನದ್ರು ನಿಮ್ಮ ಮೊಮ್ಮಗಳು ಇದ್ದಾಳಾ ಅಂದೆ,
ತಾತಾ ವಜ್ರಮುನಿ ಲುಕ್ ನಲ್ಲಿ ಕೇಳಿದಕ್ಕೆ ಉತ್ತರ ಕೊಡು ಅಂದರು, ನಾನು ಅಯ್ಯೊ ಸುಮ್ನೆ ಕಾಳು ಹಾಕಿದೆ ತಾತ ಯಾರಾದರು ಒಬ್ಬ ಹುಡಗಿ ಆದರು ತಿರುಗಿ ನೋಡ್ತಾಳೆನೊ ಅಂತಾ ಆದರೆ ಯಾರು ನೋಡಲಿಲ್ಲ ಕಾಲ ಕೆಟ್ಟು ಹೋಯಿತು ತಾತ ಹುಡಗರಿಗೆ ಬೆಲೆನೆ ಇಲ್ಲಾ ಅಂದೆ...
ಸ್ಚಲ್ಪ ಹೋತ್ತು ನನ್ನ ಮುಖ ನೋಡಿದ ತಾತ ನಂತರ  ಮೌನಕ್ಕೆ ಶರಣಾದರು, ನಾನು ಮುಂದೆ ಹೋಗಲು ಮನಸ್ಸು ಬಾರದೆ ಅಲ್ಲಿ ನಿಲ್ಲಲ್ಲು ಆಗದೆ ಚಡಪಡಿಸುತಿದ್ದೆ,
ಅವರ ಮುಖ ನೋಡಿದರೆ ಮನೆಯಲ್ಲಿ ಮಗ ಅಥವಾ ಸೋಸೆ ಜೋತೆಗೆ ಜಗಳ ಮಾಡಿ ಬಂದ ರಿತಿ ಇತ್ತು ಸರಿ ಅವರ ಮುಖದಲ್ಲಿ ಸ್ವಲ್ಪ ನಗು ಮುಡಿಸೋಣ ಅಂತಾ ಹತ್ತಿರ ಹೋಗಿ ಕುಳಿತು
ತಾತಾ ನಿಮ್ಮ ಕಾಲದ ಹುಡಗಿಯರು ಹೀಗೆ ಇದ್ರಾ ಪುಲ್ ಆಪ್ ಅಟಿಟ್ಯೂಡ್?
ಅದಕ್ಕೆ ಅವರು ನಮ್ಮ ಕಾಲದ ಹುಡಗಿಯರು ಮತ್ತು ಆವಾಗಿನ ಬೆಂಗಳುರೂ ಎರಡು ತುಂಬಾ ಬೇರೆನೆ ಇದ್ರು ಅಂದ್ರು,
ನಾನು ಹುಡಿಗಿರನ್ನು ಬಿಟ್ಟಾಹಾಕಿ ನಿಮ್ಮ ಕಾಲದ ಬೆಂಗಳುರೂ ಹೇಗಿತ್ತು ಅಂದೆ.
ಅದಕೆ ತಾತ ನಮ್ಮ ಕಾಲದಲ್ಲಿ ಇದ್ದ ಬೆಂಗಳೂರು ಬೇರೆ ಈಗಿನ ಬ್ಯಾಂಗಲುರ್ ಬೇರೆ ಅಂದು ಒಂದು ಕ್ಷಣ ಮೌನವಾಗಿ ನಂತರ
         "ನಮ್ಮ ಕಾಲದ ಬೆಂಗಳೂರು  ಭುಮಿ ಮೇಲಿನ ಸ್ವಗ೯ವಾಗಿತ್ತು, ಎಲ್ಲಿ ನೋಡಿದರು ಹಸಿರು, ಬ್ರಿಟಿಷರ ಕಾಲದ ಬಂಗಲೆಗಳು, ಅಲ್ಲೂಂದು ಇಲ್ಲೂಂದು ಕಾರುಗಳು, ಆಗಿನ ಜನ ತುಂಭಾ ಸುಸ್ಕ್ರಂತರಾಗಿದ್ದರು, ಬಿಳಿ ಪಂಚೆ(ಕಚ್ಚಿ ಪಂಜೆ) ಕಪ್ಪು ಕೋಟು ಸ್ವಲ್ಪ ಶ್ರಿಮಂತರು ಮೈಸುರು ಪೇಟವನ್ನು ಹಾಕಿ, ಕೈಯಲ್ಲಿ ಒಂದು ಬ್ಯಾಗ್ ಹಿಡಿದು ಆಫೀಸ್ ಗೆ ಹೊಗುತಿದ್ದರು, ಆ ಬ್ಯಾಗ್ ನಲ್ಲಿ ಒಂದು ಟೀಫಿನ್ ಬಾಕ್ಸ ಇರುತಿತ್ತು ಅದರಲ್ಲಿ ಇಡ್ಲಿ, ದೋಸೆ ಅಥವಾ ಉಪಿಟ್ಟು ಇರುತಿತ್ತು, ಸಂಜೆ ಮರಳಿ ಮನೆಗೆ ಬರುವಾಗ ಅದೆ ಡಬ್ಬದಲ್ಲಿ ಹೆಂಡತಿಗಾಗಿ ಮಲ್ಲಿಗೆ ಹೂ ಮತ್ತು ಬಾದಾಮಿ ಹಲ್ವಾ ತರುತಿದ್ದರು.

          ಆಗ   ಬೆಂಗಳುರಿನಲ್ಲಿ ಇದಿದ್ದು ಬರೆ ಎರಡೆ ಕಾಲ ಒಂದು ಮಳೆಗಾಲ ಇನ್ನೊಂದು ಚಳಿಗಾಲ, ಆವತ್ತಿನ ಬೆಂಗಳುರಿಗೆ ಬೇಸಿಗೆ ಅಂದ್ರೆ ಏನು ಅಂತಾನೆ ತಿಳಿದಿರಲಿಲ್ಲ, ಚಳಿಗಾಲದಲ್ಲಿ ಅಧ೯ ತೋಳಿನ ಸ್ವೆಟರ್ ಮಳೆಗಾಲದಲ್ಲಿ ಪುಲ್ ತೋಳಿನ ಸ್ವೆಟರ್ ಹಾಕಿ ಉದ್ದನೆ ಚತ್ರಿ ಹಿಡಿದು ಜನ ಆಚೆ ಬರುತ್ತಾ ಇಂದ್ರು, ಮಳೆ ಬಂದ್ರೆ ಚತ್ರಿ ತಲೆ ಮೇಲೆ ಇಲ್ಲ ಅದ್ರೆ ಊರು ಗೋಲಾಗಿ ಅಥವಾ ಬೀದಿ ನಾಯಿ ಓಡಿಸಲು ಬಳಸ್ತಾ ಇದ್ರು, ಬಿ ಎಮ್ ಟಿ ಸಿ ಆಗ ಬಿ ಟಿ ಎಸ್ ಆಗಿತ್ತು. ಕೆಲವರು ಪ್ರೀತಿಯಿಂದ "ಬೆಪ್ಪ ತಕ್ಕಡಿ ಸವಿ೯ಸ್" ಅಂತಾ ಇನ್ನು ಕೆಲವರು "ಬಿಟ್ರೆ ತಿರುಗಿ ಸಿಗಲ್ಲಾ" ಅಂತಾ ತಮಾಶೆ ಮಡ್ತಾ ಇದ್ರು, ಸಾಕ್ಷಾತ್ತ ರಜನಿಕಾಂತ್ ಬಿ ಟಿ ಎಸ್  ನಲ್ಲಿ ಕಂಡೆಕ್ಟರ್ ಆಗಿದ್ರು ಅಂದ್ರೆ ನೋಡು ಆಗಿನ ಬೆಂಗಳುರು ಹೇಗಿತ್ತು ಅಂತಾ...


                                                                      will be continued 








No comments:

Post a Comment

ಒಂದು ಊರಿನ ಕಥೆ

ನನಗೆ ನನ್ನ ಸ್ನೇಹಿತರು ಅತಿ ಹೆಚ್ಚು ಕೇಳಿರಿವ ಪ್ರಶ್ನೆ ಅಂದರೆ, ನಿಮ್ಮ ಊರಿಗೆ ರಾಣೇಬೆನ್ನೂರು ಎಂದು ಹೆಸರು ಹೇಗೆ ಬಂತು? ಎಂದು, ಅದಕ್ಕೆ ಒಂದು ಭವ್ಯವಾದ ಐತಿಹಾಸಿಕ ಕಥೆ...